Wednesday, November 9, 2016

ಆಂಜನೇಯನ ಮನದಲಿ

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

।। ಆಂಜನೇಯನ ಮನದಲಿ ನೆನೆದರೆ ಸಾಲದೇ 
    ಅವನಿಂದಾಗದ ಕಾರ್ಯ ಜಗದಲಿ ಏನಿದೆ ।।೨।।
ಆ ಸುಂದರ ಮೂರುತಿ ಮನದಲಿ ನಿಂತರೆ ಸಾಲದೇ 
ಮಾರುತಿರಾಯನು ಒಲಿದರೆ ಚಿಂತೆಯು ಏನಿದೆ  
ಆಂಜನೇಯನ ಮನದಲಿ ನೆನೆದರೆ ಸಾಲದೇ 

।। ರಾಮಚಂದ್ರನ ದುಃಖವ ಕಳೆದವನಲ್ಲವೇ
    ನಿನ್ನ ದುಃಖವನು ಕಳೆಯಲು ಅವಿನಗಸಾಧ್ಯವೇ ।। ।೨।।
ದುಷ್ಟ ರಕ್ಕಸರ ನಾಶ ಮಾಡಿದವನಲ್ಲವೇ ।೨।
ನಿನ್ನ ದುಷ್ಟ ಗುಣಗಳ ಅಳಿಸಲು ಅವನಿಗಸಾಧ್ಯವೇ ।೨।

ಆಂಜನೇಯನ ಮನದಲಿ ನೆನೆದರೆ ಸಾಲದೇ 

।। ಸಾಗರವನ್ನೇ ದಾಟಿದ ಸಾಹಸಿಯಲ್ಲವೇ 
    ಸಂಸಾರ ಸಾಗರವ ದಾಟಿಸಲವನಿಗಸಾಧ್ಯವೇ ।।।। 
ಹನುಮನ ಹೃದಯವೆ ರಾಮನ ಮಂದಿರವಲ್ಲವೇ
ಆ, ಹನುಮನ ಹೃದಯವೆ ರಾಮನ ಮಂದಿರವಲ್ಲವೇ
ಆ ಮಾರುತಿ ಒಲಿದರೆ ರಾಮನು ನಿನ್ನವನಲ್ಲವೇ ।೨।

ಆಂಜನೇಯನ ಮನದಲಿ ನೆನೆದರೆ ಸಾಲದೇ 
ಅವನಿಂದಾಗದ ಕಾರ್ಯ ಜಗದಲಿ ಏನಿದೆ 
ಆ ಸುಂದರ ಮೂರುತಿ ಮನದಲಿ ನಿಂತರೆ ಸಾಲದೇ 
ಮಾರುತಿರಾಯನು ಒಲಿದರೆ ಚಿಂತೆಯು ಏನಿದೆ  
ಆಂಜನೇಯನ ಮನದಲಿ ನೆನೆದರೆ ಸಾಲದೇ

Song: Anjaneyana Manadali
Album: Elli Hanumano Alli Ramanu

No comments:

Post a Comment