Wednesday, November 9, 2016

ಎಲ್ಲಿ ಹನುಮನೋ

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಎಲ್ಲೀ ಹನುಮನೋ ಅಲ್ಲಿ ರಾಮನು ।೨।
ಎಲ್ಲೀ ರಾಮನೋ ಅಲ್ಲಿ ಹನುಮನು 
ಎಲ್ಲೀ ಹನುಮನೋ ಅಲ್ಲಿ ರಾಮನು
ರಾಮನ ಹುಸಿರೇ ಹನುಮಾ ।೨।
ಹನುಮನ ಪ್ರಾಣವೇ ರಾಮಾ
ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು 
ಎಲ್ಲೀ ಹನುಮನೋ ಅಲ್ಲಿ ರಾಮನು

ಎಲ್ಲೀ ನೆನೆದರು ಅಲ್ಲಿಯೇ ಇರುವನು ।೨।
ಎಲ್ಲೀ ಕರೆದರೂ ಅಲ್ಲಿ ಬರುವನು
ಎಲ್ಲೀ ನೆನೆದರು ಅಲ್ಲಿಯೇ ಇರುವನು
ಎಲ್ಲೀ ಕರೆದರೂ ಅಲ್ಲಿ ಬರುವನು
ನೆರಳಿನಂತೆಯೇ ಬಳಿಯಲಿರುವನೂ ।೨।
ಕರುಣೆಯಿಂದ ಸುಖ ಶಾಂತಿ ನೀಡುವ ಮುಖ್ಯ ಪ್ರಾಣ

ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು 
ಎಲ್ಲೀ ಹನುಮನೋ ಅಲ್ಲಿ ರಾಮನು

ಮಂತ್ರ ಕೇಳನು ತಂತ್ರ ಕೇಳನು ।೨।
ಗೋತ್ರ ಮಾಡುತ ತನ್ನ ಹೊಗಳು ಎನ್ನನು 
ಮಂತ್ರ ಕೇಳನು ತಂತ್ರ ಕೇಳನು 
ಗೋತ್ರ ಮಾಡುತ ತನ್ನ ಹೊಗಳು ಎನ್ನನು 
ಪ್ರೇಮದಿಂದ ನೀ ಕರೆಯೆ ಬರುವನೂ ।೨।
ಭಕ್ತನೊಬ್ಬನೇ ಅವನ ಗೆಲುವನು ಎಂದೆಂದು

ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು 
ಎಲ್ಲೀ ಹನುಮನೋ ಅಲ್ಲಿ ರಾಮನು

।। ಸ್ಮರಣೆ ಮಾತ್ರದಿ ಮನದಿ ಬೆರೆವನು ।೨। 
    ಕಾಮ ಕ್ರೋಧ ಕ್ಷಣದಲ್ಲಿ ದಹಿಸಿ ಬಿಡುವನು ।।೨।।
ಶಾಂತಿ ಕೊಡುವನು ನೆಮ್ಮದಿಯ ತರುವನು ।೨।
ಮನಸಿಗೆ ಮಹದಾನಂದ ನೀಡುವ ಮುಖ್ಯ ಪ್ರಾಣ

ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು 
ಎಲ್ಲೀ ಹನುಮನೋ ಅಲ್ಲಿ ರಾಮನು
ರಾಮನ ಹುಸಿರೇ ಹನುಮಾ ।೨।
ಹನುಮನ ಪ್ರಾಣವೇ ರಾಮಾ
ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು 
ಎಲ್ಲೀ ಹನುಮನೋ ಅಲ್ಲಿ ರಾಮನು

Song: Anjaneyana Manadali
Album: Elli Hanumano Alli Ramanu

ಆಂಜನೇಯನ ಮನದಲಿ

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

।। ಆಂಜನೇಯನ ಮನದಲಿ ನೆನೆದರೆ ಸಾಲದೇ 
    ಅವನಿಂದಾಗದ ಕಾರ್ಯ ಜಗದಲಿ ಏನಿದೆ ।।೨।।
ಆ ಸುಂದರ ಮೂರುತಿ ಮನದಲಿ ನಿಂತರೆ ಸಾಲದೇ 
ಮಾರುತಿರಾಯನು ಒಲಿದರೆ ಚಿಂತೆಯು ಏನಿದೆ  
ಆಂಜನೇಯನ ಮನದಲಿ ನೆನೆದರೆ ಸಾಲದೇ 

।। ರಾಮಚಂದ್ರನ ದುಃಖವ ಕಳೆದವನಲ್ಲವೇ
    ನಿನ್ನ ದುಃಖವನು ಕಳೆಯಲು ಅವಿನಗಸಾಧ್ಯವೇ ।। ।೨।।
ದುಷ್ಟ ರಕ್ಕಸರ ನಾಶ ಮಾಡಿದವನಲ್ಲವೇ ।೨।
ನಿನ್ನ ದುಷ್ಟ ಗುಣಗಳ ಅಳಿಸಲು ಅವನಿಗಸಾಧ್ಯವೇ ।೨।

ಆಂಜನೇಯನ ಮನದಲಿ ನೆನೆದರೆ ಸಾಲದೇ 

।। ಸಾಗರವನ್ನೇ ದಾಟಿದ ಸಾಹಸಿಯಲ್ಲವೇ 
    ಸಂಸಾರ ಸಾಗರವ ದಾಟಿಸಲವನಿಗಸಾಧ್ಯವೇ ।।।। 
ಹನುಮನ ಹೃದಯವೆ ರಾಮನ ಮಂದಿರವಲ್ಲವೇ
ಆ, ಹನುಮನ ಹೃದಯವೆ ರಾಮನ ಮಂದಿರವಲ್ಲವೇ
ಆ ಮಾರುತಿ ಒಲಿದರೆ ರಾಮನು ನಿನ್ನವನಲ್ಲವೇ ।೨।

ಆಂಜನೇಯನ ಮನದಲಿ ನೆನೆದರೆ ಸಾಲದೇ 
ಅವನಿಂದಾಗದ ಕಾರ್ಯ ಜಗದಲಿ ಏನಿದೆ 
ಆ ಸುಂದರ ಮೂರುತಿ ಮನದಲಿ ನಿಂತರೆ ಸಾಲದೇ 
ಮಾರುತಿರಾಯನು ಒಲಿದರೆ ಚಿಂತೆಯು ಏನಿದೆ  
ಆಂಜನೇಯನ ಮನದಲಿ ನೆನೆದರೆ ಸಾಲದೇ

Song: Anjaneyana Manadali
Album: Elli Hanumano Alli Ramanu

ಸೇವಕನ ಮಾಡು

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಮಾರುತೀ.... 
ಸೇವಕನ ಮಾಡು, ಸೇವಕನ ಮಾಡು 
ಮಾರುತೀಸೇವಕನ ಮಾಡು
ನಿನ್ನಂತೆ ನನ್ನಾ, ಸೇವಕನ ಮಾಡು ।೨।
ರಾಮಚಂದ್ರನ ಸೇವಿಸೀ, ಪೂಜಿಸೀ 
ಶ್ರೀ ರಾಮಚಂದ್ರನ ಸೇವಿಸೀ, ಪೂಜಿಸಿ 
ಧನ್ಯನಾಗುವಂತೆ ಹರಸಿ ನನ್ನಾ ।೨।
ಸೇವಕನ ಮಾಡು, ಸೇವಕನ ಮಾಡು 
ನಿನ್ನಂತೆ ನನ್ನಾ, ಸೇವಕನ ಮಾಡು, ಮಾರುತೀ... 

ಸೇವಕನಾದರೆ ದೊರೆಯುವ ಪ್ರಭುವಿನ ಕರುಣೆಗೆ ಎಣೆಯೇ ಇಲ್ಲಾ 
ಸೇವೆಯು ನೀಡುವ ಮಹದಾನಂದ ಬಣ್ಣಿಸೆ ಮಾತುಗಳಿಲ್ಲಾ 
ಸೇವೆಯು ಕೊಡುವ ಫಲದ ಕಲ್ಪನೆ ।೨।
ಕಲ್ಪವೃಕ್ಷಕು ಇಲ್ಲಾ.... 

ಸೇವಕನ ಮಾಡು, ಸೇವಕನ ಮಾಡು 
ನಿನ್ನಂತೆ ನನ್ನಾ, ಸೇವಕನ ಮಾಡು, ಮಾರುತೀ.... 

ಸೇವಕನೆಂದೇ ನಂದಿಗೆ ದೊರಕಿತು ಕೈಲಾಸದಲೀ ಸ್ಥಾನ  
ಸೇವಕನಾಗೇ ಗರುಡನು ಪಡೆದ ವ್ಯಕುಂಠದಲೀ ತಾಣ
ಸೇವಕನಾದರೆ ನನ್ನಲಿ ಆಗ ।೨।
ಕರಗುವುದು ಅಜ್ಞಾನ.... 

ಸೇವಕನ ಮಾಡು, ಸೇವಕನ ಮಾಡು 
ನಿನ್ನಂತೆ ನನ್ನಾ, ಸೇವಕನ ಮಾಡು, ಮಾರುತೀ.... 

ಸೇವಕನಾಗೆ ಎಲ್ಲಾ ಶಕ್ತಿಯು ನಿನ್ನ ಕೈ ಸೇರಿತು ಹನುಮಾ 
ಪೂಜೆಯು ಹೊಂದುವ ಭಾಗ್ಯ ನೀಡಿತು ನಿನಗಾ ರಾಮ ನಾಮ 
ನನ್ನೀ ಜನುಮವು ಸಾರ್ಥಕ ತಂದೆ ।೨।
ಪಡೆದರೆ ನಿನ್ನ ಪ್ರೇಮಾ .....

ಸೇವಕನ ಮಾಡು, ಸೇವಕನ ಮಾಡು 
ನಿನ್ನಂತೆ ನನ್ನಾ, ಸೇವಕನ ಮಾಡು, ಮಾರುತೀ.... 
ಸೇವಕನ ಮಾಡು, ಮಾರುತೀ.... 

Song: Sevakana Maadu
Album: Elli Hanumano Alli Ramanu

ಕೆಂಗಲ್ಲ ಹನುಮಂತರಾಯ

ಇಡುವಹಿ: ಎಲ್ಲಿ ಹನುಮನೋ ಅಲ್ಲಿ ರಾಮನು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ ।೨।
ಅರುಣೋದಯ ಕಾಂತಿಯ ಕೆಂಪಾದ ಮೊಗದಲ್ಲಿ
ಕಣ್ತುಂಬ ಕಂಡು  ಕಣ್ತುಂಬಿ ಬಂದು
ಕೈ ಮುಗಿದೇ ಅರಿಯದೆಯೆ ಬೆರಗಾಗಿ ಜೀಯ
ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ

।। ದೈನತೆಯೇ ತುಂಬಿದ ಈ ನನ್ನ ಕಣ್ಣುಗಳು
    ಕರುಣೆಯೇ ತುಂಬಿದ ಆ ನಿನ್ನ ಕಣ್ಣುಗಳು ।।೨।।
ಒಂದಾಗಿ ಬೆರೆತಾಗ ಆನಂದದಾ ಬೇಗ
ಮನ ಹಿಗ್ಗಿ ಹೂವಾಗಿ ಪದದಲಿ ಬಿದ್ದಾಗ

ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ
ಧನ್ಯನಾದೆ ಎಂದು ಹೃದಯ ಕೂಗಿತು ಜೀಯ

।। ಎಲ್ಲಿಗೋ ಹೋಗುವ ಆತುರ ಏಕಯ್ಯಾ
    ಯಾರನೋ ನೋಡುವ ಕಾತುರ ಏನಯ್ಯಾ ।।೨।।
ಈ ನಿನ್ನ ಮಂದಿರಕೆ ಈ ದಿವ್ಯ ಸನ್ನಿದಿಗೆ
ಆಸೆಯಿಂದ ಜನರು ಬರುತಿರಲು ದರುಶನಕೆ

ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ
ಎತ್ತ ಹೋಗುವೆ ನೀನು ಹೇಳಯ್ಯ ಮಹನೀಯ
ಕೆಂಗಲ್ಲ ಹನುಮಂತರಾಯ

।। ನಾ ನಿನ್ನ ಮರೆತರೆ ನನ್ನಾತಾಯಾಣೆ
    ನೀ ಕೈಯ್ಯ ಬಿಟ್ಟರೆ ಶ್ರೀರಾಮನಾಣೆ ।।೨।।
ಉಸಿರಲ್ಲಿ ಉಸಿರಾಗಿ ಮನದಲ್ಲಿ ಸ್ಥಿರವಾಗಿ
ಮನೆ ಮಾಡಿ ನೀ ನೆಲೆಸು ಕೈ ಹಿಡಿದು ಉಧ್ಧರಿಸಿ

ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ
ಜನುಮ ಸಾರ್ಥಕ ಮಾಡು ಸ್ವಾಮೀ ಮಾರುತಿರಾಯ
ಕೆಂಗಲ್ಲ ಹನುಮಂತರಾಯ
ಓ ಕೆಂಗಲ್ಲ ಹನುಮಂತರಾಯ ।೨।

Song: Kengalla Hanumantharaaya
Album: Elli Hanumano Alli Ramanu

Monday, November 7, 2016

ನಗ ಬೇಡ ನಗ ಬೇಡ

ಚಿತ್ರ: ಬಡವರ ಬಂಧು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ/ನಟ: ಪಿ. ಬಿ. ಶ್ರೀನಿವಾಸ್

।। ನಗ ಬೇಡ ನಗ ಬೇಡ ನಗ ಬೇಡ
    ಅವನ ನೋಡುತಾ ನೀನು ನಕ್ಕರೇ
    ಊರೇ ನಗುವುದು ನೀನು ಬಿದ್ದರೆ ।।೨।।

ಒಂದೇ ದಿನದಲಿ ಬೀಜವು ಮೊಳೆತು ಹೆಮ್ಮರವಾಗುವದೇ ।೨।
ಇಂದೇ ಜನಿಸದ ಕಂದನು ನೆಡೆದು ಮಾತನಾಡುವುದೇ
ದಿನಗಳು ಕಳೆದಂತೇ, ಕಾಲವು ಬಂದಂತೇ ।೨।
ಎಲ್ಲಾ ಬೆಳೆಯುವುದು ಹೊಸತನ ಮೂಡುವುದು

ನಗ ಬೇಡ ನಗ ಬೇಡ ನಗ ಬೇಡ
ಅವನ ನೋಡುತಾ ನೀನು ನಕ್ಕರೇ
ಊರೇ ನಗುವುದು ನೀನು ಬಿದ್ದರೆ

ಕಲಿಯುವುದಿನ್ನೂ ಸಾಗರದಂತೆ ಕಲಿತವರಾರಿಲ್ಲಿ ।೨।
ಶತಮಾನಗಳೇ ಕಲಿತರು ಮುಗಿಯದು ವಿದ್ಯೆಗೆ ವಯಸೆಲ್ಲೀ
ಬಾಳಿನ ಅನುಕ್ಷಣವೂ,  ಹೊಸ ಹೊಸ ಅನುಭವವು ।೨।
ಪಾಠವ ಕಳಿಸುವುದು ನೀತಿಯ ತಿಳಿಸುವುದು

ನಗ ಬೇಡ ನಗ ಬೇಡ ನಗ ಬೇಡ
ಅವನ ನೋಡುತಾ ನೀನು ನಕ್ಕರೇ
ಊರೇ ನಗುವುದು ನೀನು ಬಿದ್ದರೆ

ಮುಂದಕೆ ಬರುವರ ಕಂಡರೆ ಕಡುಗುವ ಮನುಜರು ಧಾನವರು ।೨।
ಹೊಟ್ಟೆಯ ಕಿಚ್ಚಲಿ ತಾವೇ ಬೇಯುತ ನೋವಲಿ ನರಳುವರೂ
ಸ್ನೇಹದಿ ಬಾಳಿದರೇ, ಸಂಯಮ ತೋರಿದರೇ ।೨।
ಶಾಂತಿಯ ನೀ ಪಡೆವೇ ನೀನು ಸುಖ ಪಡೆವೆ

ನಗ ಬೇಡ ನಗ ಬೇಡ ನಗ ಬೇಡ
ಅವನ ನೋಡುತಾ ನೀನು ನಕ್ಕರೇ
ಊರೇ ನಗುವುದು ನೀನು ಬಿದ್ದರೆ

Song: Naga Beda Naga Beda
Movie: Badavara Bandu 

ಏನು ಮಾಯವೋ ಏನು ಮರ್ಮವೋ

ಚಿತ್ರ: ಭಾಗ್ಯದ ಲಕ್ಷ್ಮಿ ಬಾರಮ್ಮ 
ರಚನೆ: ಚಿ. ಉದಯಶಂಕರ್ 
ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್ 
ಗಾಯರುಕರು: ಡಾ. ರಾಜಕುಮಾರ್, ವಾಣಿ ಜಯರಾಮ್ 

ಗಂ:  ಏನು ಮಾಯವೋ 
ಹೆ:   ಏನು ಮರ್ಮವೋ 
ಗಂ:  ಏನು ಮಾಯವೋ 

ಹೆ:   ಏನು ಮರ್ಮವೋ 
ಗಂ:  ಗೆಲ್ಲುವ ಕುದುರೆ ಎಂದು ಗೆಲುವುದು  
ಹೆ:   ಹಳ್ಳದ ಕಡೆಗೆ ನೀರು ಹರಿವುದು 
ಗಂ:  ಹಣವಂತರಿಗೆ ಹಣ ಸೇರುವುದು 
ಜೊ: ಏನು ಮಾಯವೋ, ಏನು ಮರ್ಮವೋ

ಹೆ:   ಸಿಮೆಂಟು ಸಿಗದು ಎನ್ನುತಲಿದ್ದರು ಮನೆಗಳು ಏಳುತಲಿವೆಯಲ್ಲ 
ಗಂ:  ಪೆಟ್ರೋಲ್ ಬೆಲೆಯು ಏರಿದರೇನು ಹೊಸ ಕಾರುಗಳಿಗೆ ಬರವಿಲ್ಲ 
ಹೆ:   ಜನರಲಿ ಹಣವೇ ಇಲ್ಲ ಎಂದರು ಪೇಟೆಯು ಜಾತ್ರೆಯು ದಿನವೆಲ್ಲ
ಗಂ:  ಯುಧ್ಧವೇ ಬರಲಿ ಕ್ಷಾಮವೆ ಬರಲಿ ಸಿನಿಮಾ ಡ್ರಾಮಾ ನಿಲ್ಲಲ್ಲ 
ಹೆ:   ಇವರಿಗೆ ದೊರೆತ ಈ ಶ್ರೀಮಂತಿಕೆ ನಮಗೆ ಏಕೆ ಸಿಕ್ಕಿಲ್ಲ
ಗಂ:  ಅಯ್ಯೋ ಮಂಕೆ ತಿಳುದುಕೋ ನಿಜವ ನಮಗೆ ಅಂತ ಲಕ್ಕಿಲ್ಲ
        ನಮಗೆ ಅಂತ ಲಕ್ಕಿಲ್ಲ

ಜೊ: ಏನು ಮಾಯವೋ, ಏನು ಮರ್ಮವೋ

ಹೆ:   ಲಾಸು ಲಾಸು ಎನ್ನುತಲಿದ್ದರು ಬಿಸಿನೆಸ್ ಯಾವುದು ಡಲ್ಲಿಲ್ಲ 
ಗಂ:  ಟ್ಯಾಕ್ಸು ರೈಡು ಎಂದರೆ ಏನು ಧನಿಕರ ಸಂಖ್ಯೆ ಕರಗಿಲ್ಲ 
ಹೆ:   ತ್ರೀ ಸ್ಟಾರ್ ಫೈವ್ ಸ್ಟಾರ್ ಹೋಟೆಲ್ಗಳಲು ಕಾಲಿ ರೂಮು ಒಂದಿಲ್ಲ 
ಗಂ:  ಬಸ್ಸು ಟ್ರೈನು ಪ್ಲಾನೇ ಆಗಲಿ ಸತ್ತರು ಟಿಕ್ಕೆಟ್ಟು ಸಿಕ್ಕಲ್ಲ 
ಹೆ:   ಹಣವನು ಮಾಡುವ ಸುಲುಭೋಪಾಯ ನಿನಗೆ ಏಕೆ ತಿಳಿದಿಲ್ಲ 
ಗಂ:  ನಿನ್ನನು ಬಿಟ್ಟು ಕಂಬಿಯ ಎಣಿಸೊ ಆಸೆಯು ಇನ್ನು ಬಂದಿಲ್ಲ 
        ಆಸೆಯು ಇನ್ನು ಬಂದಿಲ್ಲ 

ಗಂ:  ಏನು ಮಾಯವೋ 

ಹೆ:   ಏನು ಮರ್ಮವೋ 
ಗಂ:  ಏನು ಮಾಯವೋ 

ಹೆ:   ಏನು ಮರ್ಮವೋ 
ಗಂ:  ಗೆಲ್ಲುವ ಕುದುರೆ ಎಂದು ಗೆಲುವುದು  
ಹೆ:   ಹಳ್ಳದ ಕಡೆಗೆ ನೀರು ಹರಿವುದು 
ಜೊ: ಹಣವಂತರಿಗೆ ಹಣ ಸೇರುವುದು 
        ಏನು ಮಾಯವೋ, ಏನು ಮರ್ಮವೋ ।೨।

Song: Enu Mayavo Enu Marmavo
Movie: Bhagyada Lakshmi Baaramma