Monday, July 31, 2017

ನಿನ್ನ ಚೆಲುವ ವದನ

ಚಿತ್ರ: ಜೀವನ ಚೈತ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ಮಂಜುಳಾ ಗುರುರಾಜ್

ಗಂ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 
      ನೆನೆಯಲು ಕಾಮನ ಸುಮಬಾಣನ ಅದೇ ದಿನ 
      ಕುಣಿಯಿತು ಮನ, ತಣಿಸುತ ನನ್ನಾ 
      ನಯನದಿ ನಯನ ಬೆರೆತಾ ಕ್ಷಣ ।೨।
ಹೆ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 
      ನೆನೆಯಲು ಕಾಮನ ಸುಮಬಾಣನ ಅದೇ ದಿನ 
      ಕುಣಿಯಿತು ಮನ, ತಣಿಸುತ ನನ್ನಾ 
      ನಯನದಿ ನಯನ ಬೆರೆತಾ ಕ್ಷಣ ।೨। 
ಜೊ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 

ಗಂ:  ಶೃಂಗಾರದ ಸಂಗೀತದ ಸ್ವರ ಮೂಡುತಲಿರೇ
      ಅನುರಾಗದ ನವಪಲ್ಲವಿ ಎದೆ ಹಾಡುತಲಿರೇ
ಹೆ:  ಹಣ್ಣಾದೆನು ಹೆಣ್ಣಾದೆನು ನಸುಸಾಚಿಕೆ ಬರೇ
      ನಿನ್ನ ಆಸೆಯು ನನ್ನ ಆಸೆಯು  ಜೊತೆಯಾಗುತಲಿರೇ
ಗಂ:  ನಿನ್ನ ಚಲುವಿನಲೀ, ನಿನ್ನ ಒಲವಿನಲೀ, ಹುಸಿ ನಗುವಿನಲೀ, ಮೃದು ನುಡಿಗಳಲೀ
ಹೆ:  ಸಿಹಿ ಜೇನಿನ ಸವಿ ಕಂಡೆನು ನಿನ್ನ ನೋಡುತಲಿರೇ

ಜೊ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 

ಹೆ:  ಉಲ್ಲಾಸದೀ ತಂಗಾಳಿಯು ತನು ಸೋಕುತಲಿರೇ 
      ಬಿಳಿಮೋಡವು ನಸುಗೆಂಪಿನ ರಂಗಾಗುತಲಿರೇ 
ಗಂ:  ಸಂತೋಷದ ಉಯ್ಯಾಲೆಯು ತೂಗಾಡುತಲಿರೇ 
      ಮಧುಮಾಸದ ನೆನಪಾಯಿತು ಹಿತವಾಗುತಲಿರೇ 
ಹೆ:  ಮಾಮರಗಳಲೀ, ಹಸಿರೆಲೆಗಳಲೀ, ಮನತಣಿಸುತಲೀ, ಸುಖತುಂಬುತಲೀ 
ಗಂ:  ಮರಿಕೋಗಿಲೆ ಹೊಸರಾಗದ ಧನಿ ಮಾಡುತಲಿರೇ 

ಹೆ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ 
ಗಂ:  ನೆನೆಯಲು ಕಾಮನ ಸುಮಬಾಣನ ಅದೇ ದಿನ 
ಹೆ:  ಕುಣಿಯಿತು ಮನ, ತಣಿಸುತ ನನ್ನಾ 
ಗಂ:  ನಯನದಿ ನಯನ ಬೆರೆತಾ ಕ್ಷಣ
ಹೆ:  ನಯನದಿ ನಯನ ಬೆರೆತಾ ಕ್ಷಣ

Song: Ninna Cheluva Vadana
Movie: Jeevana Chaitra

ಲಕ್ಷ್ಮೀ ಬಾರಮ್ಮ

ಚಿತ್ರ: ಜೀವನ ಚೈತ್ರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ಮಂಜುಳಾ ಗುರುರಾಜ್ 

ಹೆ:  ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ ।೨।
       ಬೆಳಗಲು ಮನೆಯನ್ನು ಸಿರಿದೇವಿಯೇ 
ಗಂ: ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಹೆ:  ಕಾಲಲಿ ಕೀರು ಗೆಜ್ಜೆ ಗಲು ಗಲು ಎಂದಾಗ 
ಗಂ: ಕಾಲಲಿ ಕೀರು ಗೆಜ್ಜೆ ಗಲು ಗಲು ಎಂದಾಗ 
       ಮನೆಯಲಿ ನೂರು ವೀಣೆ ನಾದ ಹೊಮ್ಮಿ ಚಿಮ್ಮಲೀ 
ಜೊ:  ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ 
       ಬೆಳಗಲು ಮನೆಯನ್ನು ಸಿರಿದೇವಿಯೇ 

ಹೆ:  ಅನುಗಾಲ ಜೊತೆಯಾಗಿ ನಮ್ಮ ಹರಿಯನ್ನು ಸೇರಲು ಬಾರಮ್ಮ 
ಗಂ: ಅನುಗಾಲ ಜೊತೆಯಾಗಿ ನಮ್ಮ ಹರಿಯನ್ನು ಸೇರಲು ಬಾರಮ್ಮ 
ಹೆ:  ನಮ್ಮ ಸೊಸೆಯಾಗಿ ನರಹರಿ ಸತಿಯಾಗಿ 
ಗಂ: ನಮ್ಮ ಸೊಸೆಯಾಗಿ ನರಹರಿ ಸತಿಯಾಗಿ, ನಮಗಾನಂದ ನೀಡುತಲೀ 
ಹೆ:  ನಮಗಾನಂದ ನೀಡುತಲೀ 
ಗಂ: ಸುಖವನು ನೀ ತಾರೆ ನಮ್ಮ ಭಾಗ್ಯದೇವತೇ 
ಜೊ:  ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ 
       ಬೆಳಗಲು ಮನೆಯನ್ನು ಸಿರಿದೇವಿಯೇ 

ಗಂ: ಹಿತವಾದ ಶ್ರುತಿಯಲ್ಲಿ ನಮ್ಮ ಬದುಕೆಂಬ ಗೀತೆಯ ಹಾಡಮ್ಮಾ 
ಹೆ:  ಹಿತವಾದ ಶ್ರುತಿಯಲ್ಲಿ ನಮ್ಮ ಬದುಕೆಂಬ ಗೀತೆಯ ಹಾಡಮ್ಮಾ 
ಗಂ: ಪ್ರೀತಿ ಸುಮವಾಗಿ ಜೇನಿನ ಹನಿಯಾಗಿ 
ಹೆ:  ಪ್ರೀತಿ ಸುಮವಾಗಿ ಜೇನಿನ ಹನಿಯಾಗಿ, ಹೊಸಸಂತೋಷ ತುಂಬುತಲೀ 
ಗಂ: ಹೊಸಸಂತೋಷ ತುಂಬುತಲೀ 
ಹೆ:  ಕೀರ್ತಿಯ ತಾರಮ್ಮ ನಮ್ಮ ಭಾಗ್ಯದೇವತೇ 
ಜೊ:  ।। ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ 
           ಬೆಳಗಲು ಮನೆಯನ್ನು ಸಿರಿದೇವಿಯೇ  ।।೨।।

Song: Lakshmi Baaramma
Movie: Jeevana Chaitra

ಅರಳಿದ ತನುವಿದು

ಚಿತ್ರ: ಜೀವನ ಚೈತ್ರ 
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್

।। ಅರಳಿದ ತನುವಿದು ಅಂದವೋ ಅಂದ 
    ನಲಿದಿರುವ ಮನವಿನ್ನೂ ಚಂದವೋ ಚಂದ ।।೨।। 
ಸಂತೋಷದೀ ನೀನಿರು ಬರುವನು ಕಂದ 
ಅರಳಿದ ತನುವಿದು ಅಂದವೋ ಅಂದ 
ನಲಿದಿರುವ ಮನವಿನ್ನೂ ಚಂದವೋ ಚಂದ

ಮೆದುವಾಗಿ ನೆಡಿ, ನಿನ್ನಾಸೆ ಏನೂ ನುಡಿ 
ಬಯಕೆಗಳ ಸರವಿರಲಿ, ಸಂಕೋಚವೇಕೇ 
ದಿನವೆಲ್ಲ ನಗು, ಆನಂದದಿಂದಾ ನಗು 
ಬೆಳೆಯುತಿಹ ಹಸುಕಂದ ನಗುವಂತೆ ನಲ್ಲೇ 
ಬದುಕೆಲ್ಲ ಹೀಗೇ ಇರು, ಉಲ್ಲಾಸದಿಂದಾ 

ಅರಳಿದ ತನುವಿದು ಅಂದವೋ ಅಂದ 
ನಲಿದಿರುವ ಮನವಿನ್ನೂ ಚಂದವೋ ಚಂದ

ಒಲವೆಂಬಾ ಲತೆ, ಹೂವೊಂದು ಬಿಡುವಾ ದಿನ 
ಸಡಗರದಿ ಬರುತಿರಲು, ಉಲ್ಲಾಸ ಕಂಡೇ 
ಮಧುಮಾಸಾ ದಿನ, ನೀ ನನಗೆ ಒಲಿದಾ ಕ್ಷಣ 
ಬಾಳಲ್ಲಿ ಹೊಸದಾದ ಸುಖವನ್ನು ತಂದೇ 
ನನ್ನ ಭಾಗ್ಯತಾನೇ ಇದು, ನಿಜ ಹೇಳು ನೀನು 

ಅರಳಿದ ತನುವಿದು ಅಂದವೋ ಅಂದ 

ನಲಿದಿರುವ ಮನವಿನ್ನೂ ಚಂದವೋ ಚಂದ
ಸಂತೋಷದೀ ನೀನಿರು ಬರುವನು ಕಂದ 

ಅರಳಿದ ತನುವಿದು ಅಂದವೋ ಅಂದ 
ನಲಿದಿರುವ ಮನವಿನ್ನೂ ಚಂದವೋ ಚಂದ

Song: Aralida Thanuvidu
Movie: Jeevana Chaitra

ಮಾನವನಾಗಿ ಹುಟ್ಟಿದ ಮೇಲೆ

ಚಿತ್ರ: ಜೀವನ ಚೈತ್ರ 
ರಚನೆ: ಮೂಗೂರ್ ಮಲ್ಲಪ್ಪ 
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ।೨।
ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ 
ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ ।೨।
ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ 

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ 
ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ

ರಾಜ ರೋರರ್ ರಾಕೆಟ್ ಲೇಡಿ ಚತ್ರುಮುಖ 
ಜೋಡಿ ಕೂಡಿ ಹಾಡುತ್ತಾವ ಹಿಂದಿನ್ ಸುಖ 
ತಾನು ಬಿದ್ರೆ ಆದೀತೇಳು ತಾಯಿಗೆ ಬೆಳಕ 
ಮುಂದಿನವರು ಕಂಡ್ರೆ ಸಾಕು ಸ್ವರ್ಗ ಸುಖ 
ಒಂದು ಎರಡು ಮೂರು ನಾಕು ಅದಾವ್ ಮತ
ಹಿಂದಿನಿಂದ ಹರಿದು ಬಂದಿದ್ ಒಂದೇ ಮತ 
ಗುಂಡಿಗೆ ಬಿದ್ದು ಹಾಳಾಗ್ಲಿಕ್ಕೆ ಸಾವಿರ್ ಮತ 
ಮುಂದೆ ಹೋಗಿ ಸೇರೊದಲ್ಲಿ ಒಂದೇ ಮತ 

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ।೨।

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು 
ಬೆಳ್ಳಿ ಬಂಗಾರ ಬೆಳಿತಾವ ಸುತ್ತಾ ಕಾಡು 
ಭೂಮಿ ತಾಯಿ ಮುಡಿದು ನಿಂತಾ ಬಾಸಿಂಗ್ ಜೋಡು 
ಬಾಣಾವತಿ ಬೆಡಗಿನಿಂದ ಬರ್ತಾಳ್ ನೋಡು 
ಶರಾವತಿ ಕನ್ನಡನಾಡ ಭಾಗೀರಥಿ 
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತಿ 
ಸಾವು ನೋವು ಸುಳಿಯೋದಿಲ್ಲಿ ಕರಾಮತಿ 
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ 

।। ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
    ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ 
    ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ

    ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ ।।೨।।

Song: Manavanagi Huttida Mele
Movie: Jeevana Chaitra

Friday, June 2, 2017

ಶ್ರುತಿ ಸೇರಿದೆ ಹಿತವಾಗಿದೆ

ಚಿತ್ರ: ಶ್ರುತಿ ಸೇರಿದಾಗ
ರಚನೆ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ 

ಹೆ:   ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ 
ಗಂ:  ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ 
ಹೆ:   ಶ್ರುತಿ ಸೇರಿದೆ
ಗಂ:  ಹಿತವಾಗಿದೆ

ಗಂ:  ಹೊಸ ರಾಗದ ಲತೆಯಲ್ಲಿ ಹೊಸ ಪಲ್ಲವಿ ಹೂವಾಗಿದೆ ।೨।
        ಹೊಸ ಆಸೆಯ ಕಂಪಿಂದ ಹೊಸ ಪ್ರೇಮವು ಸವಿಯಾಗಿದೆ ।೨।
ಹೆ:   ಹೊಸ ಲೋಕವು ಕಣ್ತುಂಬಿ ಹೊಸ ರೀತಿಯು ತಂದಾಗಿದೆ ।೨।
        ಬದುಕೆಲ್ಲಾ ಹಸಿರಾಗಿ, ಒಲವೊಂದೇ ಉಸಿರಾಗಿ 

ಗಂ:  ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ 
ಹೆ:   ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ 

ಹೆ:   ಮಳೆಗಾಲವು ಬಂದಾಗಿದೆ, ನೆಲವೆಲ್ಲಾ ಹಸಿರಾಗಿದೆ ।೨।
        ಚಳಿಗಾಲವ ಕಂಡಾಗಿದೆ ಮಂಜಿನ ತೆರೆ ಹಾಸಿದೆ ।೨।
ಗಂ:  ಋತು ಚಕ್ರವು ಉರುಳಿರಲು ಬಾಳೆಂಬುವ ಬಳ್ಳಿಯಲಿ ।೨।
        ಹೊಸದೊಂದು ಮೊಗ್ಗಾಗಿ ತಂಪಾರದ ಬೆಳಕಾಗಿ 

ಹೆ:   ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ 
ಗಂ:  ಹಿತವಾಗಿದೆ
ಜೊ: ಮಾತೆಲ್ಲವು ಹಿಂಪಾಗಿದೆ 
        ಶ್ರುತಿ ಸೇರಿದೆ, ಹಿತವಾಗಿದೆ

Song: Shruti Seride Hitavagide
Movie: Shruti Seridaga

ರಾಜಾ ಮುದ್ದು ರಾಜ

ಚಿತ್ರ          : ಸಂಪತ್ತಿಗೆ ಸವಾಲ್
ರಚನೆ       : ಚಿ ಉದಯಶಂಕರ್
ಸಂಗೀತ    : ಜಿ. ಕೆ. ವೆಂಕಟೇಶ್
ಗಾಯಕ    : ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ 

ಹೆ:  ರಾಜಾ ಮುದ್ದು ರಾಜಾ
       ನೂಕುವಂತ ಕೋಪ ನನ್ನಲ್ಲೇಕೇ
       ಸರಸದ ವೇಳೆ ದೂರ ನಿಲ್ಲಬೇಕೇ, ಕೋಪವೇಕೇ 
       ನಿನಗಾಗಿ ಬಂದೆ, ಬಲವನ್ನು ತಂದೆ, ನನದೆಲ್ಲ ನಿಂದೇ 
       ರಾಜಾ ಮುದ್ದು ರಾಜಾ
       ನೂಕುವಂತ ಕೋಪ ನನ್ನಲ್ಲೇಕೇ, ಮುದ್ದು ರಾಜಾ

ಹೆ:  ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ, ರಾಜಾ ನನ್ನ ರಾಜಾ
       ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ, ರಾಜಾ 
       ಆಸೆ ಬಾರದೇನು, ನಾ ಅಂದವಿಲ್ಲವೇನು
       ಮನಸ್ಸಿನ್ನು ಕಲ್ಲೇನು, ರಾಜಾ ಬೇಡ ರಾಜಾ
       ನೂಕುವಂತ ಕೋಪ ನನ್ನಲ್ಲೇಕೇ, ಮುದ್ದು ರಾಜಾ

ಗಂ: ಹಣದ ಸೊಕ್ಕಿನಿಂದ ಮೆರೆದಾಡೊ ನಿನ್ನ ಚಂದ, ಬಲ್ಲೇ ನಾ ಬಲ್ಲೇ
       ಹಣದ ಸೊಕ್ಕಿನಿಂದ ಮೆರೆದಾಡೊ ನಿನ್ನ ಚಂದ, ಬಲ್ಲೇ
       ಬೆಂಕಿಯಂತೆ ನಾನು, ತಣ್ಣೇರಿನಂತೆ ನೀನು
       ನೀನನ್ನ ಜೊತೆಯೇನು ನಿಲ್ಲೇ, ದೂರ ನಿಲ್ಲೇ

ಹೆ:  ಗಂಡುಬೀರಿಯಲ್ಲ ನಾ ಹಿಂದಿನಂತೆ ಇಲ್ಲ, ನಲ್ಲಾ ನನ್ನ ನಲ್ಲಾ
       ಗಂಡುಬೀರಿಯಲ್ಲ ನಾ ಹಿಂದಿನಂತೆ ಇಲ್ಲ, ನಲ್ಲಾ
       ತಂದೆ ಮಾತ ತಳ್ಳಿ, ನಾನೋಡಿ ಬಂದೆ ನಲ್ಲ
       ನಿನ್ನಾಣೆ ಸುಳ್ಳಲ್ಲ, ರಾಜಾ ಮುದ್ದು ರಾಜಾ
       ನೂಕುವಂತ ಕೋಪ ನನ್ನಲ್ಲೇಕೇ ಮುದ್ದು ರಾಜಾ

ಗಂ: ನನ್ನಲೇನು ಮೋಹ ಇದೇನು ನಿನ್ನ ಸ್ನೇಹ, ಇಲ್ಲಾ ಸರಿ ಅಲ್ಲಾ
ಹೆ:  ನಮ್ಮ ಊರಲೆಲ್ಲಾ ಗಂಡೊಬ್ಬರು ಹುಟ್ಟಿಲ್ಲ
       ಅದಕ್ಕಾಗೆ ಬಿಡಲಾರೆ ವೀರಾ, ಹಮ್ಮೀರಾ
       ರಾಜಾ ಮುದ್ದು ರಾಜಾ
       ನೂಕುವಂತ ಕೋಪ ನನ್ನಲ್ಲೇಕೇ

ಗಂ: ಪ್ರೀತಿಯಿಂದ ಮೈಯ್ಯ ಬಳಸಬೇಕೇ ಇನ್ನು ಸಾಕೇ
       ಸಾಕೇ ಇಲ್ಲ ಬೇಕೇ ।೨।

Movie: Sampattige Savaal 
Song: Raja Muddu Raja

Tuesday, May 30, 2017

ನಗುವುದೋ ಅಳುವುದೋ

ಚಿತ್ರ          : ಸಂಪತ್ತಿಗೆ ಸವಾಲ್
ರಚನೆ       : ಚಿ ಉದಯಶಂಕರ್
ಸಂಗೀತ    : ಜಿ. ಕೆ. ವೆಂಕಟೇಶ್
ಗಾಯಕ    : ಪಿ. ಬಿ. ಶ್ರೀನಿವಾಸ್ 

ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ನಗುವುದೋ ಅಳುವುದೋ, ಈಗ ಏನು ಮಾಡಲೀ

ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ

ಬಡವರ ಕಂಬನಿಗೇ ಬೆಲೆಯೇ ಇಲ್ಲ
ಧನಿಕರ ವಂಚನೆಗೇ ಕೊನೆಯೇ ಇಲ್ಲ
ತಳುಕಿನಾ ಮಾತುಗಳ ನಂಬುವರೆಲ್ಲಾ
ಸತ್ಯವನು ನುಡಿದಾಗ ಸಿಡಿಯುವರೆಲ್ಲ
ದೂರ ತಳ್ಳುವರಲ್ಲ ।೨।

ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ನಗುವುದೋ ಅಳುವುದೋ, ಈಗ ಏನು ಮಾಡಲೀ

ನಗುವುದೋ ಅಳುವುದೋ ನೀವೇ ಹೇಳೀ

ತಾಯಿಯೇ ಮಗನನ್ನು ನಂಬದೆ ಇರಲು 
ಅಣ್ಣನೇ ಮನೆಯಿಂದ ಹೊರಗೆ ತಳ್ಳಲು
ಕಾಲವೇ ಎದುರಾಗಿ ವೈರಿಯಾಗಲು
ಅತ್ತಿಗೆಯ ಕಂಗಳಲಿ ಕಂಡೆನು ನಾನು
ಮಾತೃ ವಾತ್ಸಲ್ಯವನು ।೨।

ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ

ಬಡ್ಡಿಯಾ ಹಣ ತಿಂದು ಬಡವರ ಕೊಂದು
ಕೊಬ್ಬಿದಾ ಶ್ರೀಮಂತನೆ ನಾ ನಿನಗಿಂದು
ಹಾಕುವೆವ್ ಸಂಪತ್ತಿಗೆ ನನ್ನ ಸವಾಲು
ಸಿರಿತನದಾ ಗರ್ವವನು ಮೆಟ್ಟಿ ಮೆರೆಯುವೆ
ಸೊಕ್ಕು ಮುರಿಯುವೇ, ನಿನ್ನ ಸೊಕ್ಕು ಮುರಿಯುವೆ!

Movie: Sampattige Savaal 
Song: Naguvudo Aluvudo

ಹೊಸ ಬೆಳಕೂ ಮೂಡುತಿದೇ

ಚಿತ್ರ: ಹೊಸಬೆಳಕು 
ರಚನೆ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕ: ಡಾ. ರಾಜಕುಮಾರ್ 

ಹೊಸ ಬೆಳಕೂ, ಮೂಡುತಿದೇ 
ಬಂಗಾರದ, ರಥವೇರುತ, ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ
ಕಾಂತಿಯಾ, ರವಿ ಕಾಂತಿಯಾ

।। ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೇ 
   ತಣ್ಣನೆ ಗಾಳಿ ಪರಿಮಳ ಹೀರಿ
   ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೇ  ।।೨।।
ಹಕ್ಕಿ ಮುಗಿಲನ್ನು ನೋಡೀ, ಬೆಳಕು ಬಂತೆಂದು ಹಾಡೀ ।೨।
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೇ, ಹಾರಿದೇ

ಹೊಸ ಬೆಳಕೂ, ಮೂಡುತಿದೇ 

।। ಬೆಟ್ಟದಿಂದ ನೀರು ಜಾರಿ ಧುಮುಕುತಿದೇ
   ಸಾಗರ ಸೇರೋ, ಆಸೆಯ ತೋರಿ
   ಗಾಳಿಯಂತೆ ವೇಗವಾಗಿ ಹರಿಯುತಲಿದೇ ।।೨।।
ಬೆಳ್ಳಿ ಬೆಳಕನ್ನು ನೋಡೀ, ಮಂಜು ಮರೆಯಾಗಿ ಓಡೀ ।೨।
ಎಲೆಯ ಮರೆಯ ಸೇರೀ ನಲಿವ ಕೋಗಿಲೇ, ಹಾಡಿದೇ

ಹೊಸ ಬೆಳಕೂ, ಮೂಡುತಿದೇ 
ಬಂಗಾರದ, ರಥವೇರುತ, ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ
ಕಾಂತಿಯಾ, ರವಿ ಕಾಂತಿಯಾ

Song: Hosa Belakoo Mooduthide
Movie: Hosabelaku

Monday, May 29, 2017

ನೀನಾದೆ ಬಾಳಿಗೆ ಜ್ಯೋತಿ

ಚಿತ್ರ: ಹೊಸಬೆಳಕು 
ರಚನೆ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ 

ಹೆ:  ನೀನಾದೆ ಬಾಳಿಗೆ ಜ್ಯೋತಿ, ನಾ ಕಂಡೆ ಕಾಣದ ಪ್ರೀತಿ ।೨।
       ಮನಸು ಹೂವಾಗಿ ಕನಸು ನೂರಾಗಿ ।೨।
       ಈ ಜೀವ ಬಾನಲ್ಲಿ ತೇಲಾಡಿದೇ  
ಗಂ: ಬಾ ಎನ್ನ ಬಾಳಿನ ಜ್ಯೋತಿ, ಬಾ ನನ್ನ ಪ್ರೇಮದ ಕಾಂತಿ ।೨।
       ಮನಸು ಹೂವಾಗಿ ಕನಸು ನೂರಾಗಿ ।೨।

       ಈ ಜೀವ ಬಾನಲ್ಲಿ ತೇಲಾಡಿದೇ  

ಹೆ:  ರವಿ ಮೂಡಿ ಆಗಸದಲ್ಲಿ, ಬೆಳಕನ್ನು ಚೆಲ್ಲಿದ ಹಾಗೆ 
       ಇರುಳಾದ ಬಾಳಲ್ಲಿ ಬಂದೆ, ಸಂತೋಷ ಸಂಭ್ರಮ ತಂದೆ 
       ಈ ಜೀವವು ನಲಿದಾಡಿದೇ ।೨।
ಗಂ: ಇನ್ನು ಎಂದೆಂದು ನೋವು ನಿನಗಿಲ್ಲ ।೨।
       ಬಿಸಿಲಲ್ಲಿ ನೆರಳಾಗಿ ಹಿತ ನೀಡುವೇ  

ಹೆ:  ನೀನಾದೆ ಬಾಳಿಗೆ ಜ್ಯೋತಿ
ಗಂ: ಬಾ ನನ್ನ ಪ್ರೇಮದ ಕಾಂತಿ

ಗಂ: ಹೊಸ ರಾಗ ಹಾಡಲು ನೀನು, ಹೊಸ ಲೋಕ ಕಂಡೆನು ನಾನು 
       ಹೊಸ ದಾರಿ ನೋಡಿದೆ ಏನು, ಜೊತೆಯಾಗಿ ಬರುವೆಯ ಇನ್ನೂ 
       ನನ್ನಾಸೆಯಾ ಪೂರೈಸೆಯಾ ।೨।
ಹೆ:  ನಿನ್ನ ಹುಸಿರಾಗಿ, ಬಾಳ ಹಸಿರಾಗಿ ।೨।
       ಎಂದೆಂದು ಒಂದಾಗಿ ನಾ ಬಾಳುವೇ 

ಗಂ: ಬಾ ಎನ್ನ ಬಾಳಿನ ಜ್ಯೋತಿ
ಹೆ:  ನೀನಾದೆ ಬಾಳಿಗೆ ಜ್ಯೋತಿ, ನಾ ಕಂಡೆ ಕಾಣದ ಪ್ರೀತಿ
ಜೊ:ಮನಸು ಹೂವಾಗಿ ಕನಸು ನೂರಾಗಿ ।೨।


       ಈ ಜೀವ ಬಾನಲ್ಲಿ ತೇಲಾಡಿದೇ  

Song: Neenade Balige Jyothi
Movie: Hosabelaku

ಚಳಿ ಚಳಿ ನಡುಕವು

ಚಿತ್ರ: ತಾಯಿಗೆ ತಕ್ಕ ಮಗ 
ರಚನೆ: ಚಿ. ಉದಯಶಂಕರ್ 
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕರು:  ಡಾ. ರಾಜಕುಮಾರ್, ಎಸ್. ಜಾನಕಿ 

ಗಂ:  ಚಳಿ ಚಳಿ ಆ ಆ ।೧।
         ನಡುಕವು, ಮಯ್ಯಲಿ, ಕಾತರ ಮನದಲಿ, ಆತುರ ತುಟಿಯಲಿ
         ನನ್ನಾ ಸೇರಿಸೆಯಾ, ಒಂದಾ ಕೊಡುವೆಯಾ
ಹೆ:    ಮದುವೆಯು ಮುಗಿಯಲಿ, ಹಿರಿಯರು ಹರಿಸಲಿ
         ಕೊರಳಿನ ತಾಳಿಯ ಅನುಮತಿ ದೊರೆಯಲಿ
         ನೀ ಬೇಡ ಎನ್ನಲು, ನಾ ನಿನ್ನಾ ಬಿಡೆನೂ

ಗಂ:  ಇಂದು ನಮದು, ಮುಂದೆ ಏನೋ, ಯಾರು ಬಲ್ಲವರೂ
         ಎಂದು ಬರುವ ಮದುವೆ ದಿನವ ಯಾರು ಕಾಯುವರೂ
ಹೆ:    ಎಂದೆ ಬರಲಿ ಹೇಗೆ ಬರಲಿ ನೀವು ನನ್ನವರೂ
         ಸಹನೆಯಿಂದ ಇರುವ ಜನರೇ ಸುಖವ ಹೊಂದುವರೂ

ಗಂ:  ಚಳಿ ಚಳಿ ಆ ಆ, ನಡುಕವು, ಮಯ್ಯಲಿ
          ಕಾತರ ಮನದಲಿ, ಆತುರ ತುಟಿಯಲಿ
          ನನ್ನಾ ಸೇರಿಸೆಯಾ, ಒಂದಾ ಕೊಡುವೆಯಾ

ಹೆ:    ಒಲಿದ ಹೆಣ್ಣ ತೋಳಿನಲ್ಲಿ ಹೀಗೆ ಅಳುಕದಿರೂ 
         ಮೈಗೆ ಮೈಯ್ಯ ಮಸೆದು ಬಿಸಿಯ ತುಂಬಿ ಕೆಣಕದಿರೂ 
ಗಂ:  ಏನೇ ಮಾಡು ಯಾರು ಇಲ್ಲ ನಮ್ಮ ನೋಡುವರೂ
         ಮುತ್ತನೊಂದು ಕೊಡೆನು ಈಗ ಯಾರು ಕೇಳುವರೂ


ಹೆ:    ಚಳಿ ಚಳಿ, ಮದುವೆಯು ಮುಗಿಯಲಿ, ಹಿರಿಯರು ಹರಿಸಲಿ
         ಕೊರಳಿನ ತಾಳಿಯ ಅನುಮತಿ ದೊರೆಯಲಿ

         ನೀ ಬೇಡ ಎನ್ನಲು, ನಾ ನಿನ್ನಾ ಬಿಡೆನೂ
ಗಂ:  ನಾ ನಿನ್ನಾ ಬಿಡೆನೂ

Song: Chali Chali Nadukavu
Movie: Thayige Thakka Maga

Monday, May 15, 2017

ಹರಿನಾಮವೇ ಚಂದ

ಚಿತ್ರ: ಭಕ್ತ ಕುಂಬಾರ  
ರಚನೆ: ಹುಣಸೂರು ಕೃಷ್ಣಮೂರ್ತಿ  
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಪಿ. ಬಿ. ಶ್ರೀನಿವಾಸ್   

ಹರಿನಾಮವೇ ಚಂದ ।೨।
ಅದ ನಂಬಿಕೋ ಕಂದ ।೨।
ಹರಿನಾಮ, ಹರಿನಾಮವೇ

ಹಿಂದಿನ ಸಾಲ ತೀರಿಸಲೆಂದೂ
ಬಂದಿಹೆವಯ್ಯಾ ಜನ್ಮವ ತಳೆದೂ
ಅ ಆ..
ಹಿಂದಿನ ಕಾಲ ತೀರಿಸಲೆಂದೂ
ಬಂದಿಹೆವಯ್ಯಾ ಜನ್ಮವ ತಳೆದೂ
ಮುಂದಿನ ಬದುಕು ಬಂಧುರವೆನಿಸೋ 
ಗುರಿ ಸಾಧಿಸೋ ಕಂದಾ 

ಹರಿನಾಮವೇ ಚಂದಾ
ಅದ ನಂಬಿಕೋ ಕಂದಾ
ಹರಿನಾಮವೇ, ಹರಿನಾಮವೇ

ಮಣ್ಣಿನ ಹಾಗೆ ಮಾಗಿಸೆ ಮನವ
ಚಿನ್ಮಯನೆಂಬೋ ನಾಮದ ಜಲವಾ ।೨।
ಸೇರಿಸಿ ಬೆರೆಸೀ, ಮುಕುತಿಯ ಗಳಿಸಿ
ಸುಖಿಯಾಗೊ ನೀ ಕಂದಾ

ಹರಿನಾಮವೇ ಹರಿನಾಮವೇ

ಗೋವಿಂದ ಗೋವಿಂದ ಗೋವಿಂದನೆಂದು
ಎಂದೆಂದೂ ನೀನಂದು ಆನಂದ ಹೊಂದು
ತಂದೆಯಂತೆ ಬಂದೂ, ತಲೆ ಕಾವನಯ್ಯಾ ಬಂಧೂ
ಸಂತನೆಂದು ಗುಣವಂತನೆಂದು ಭಗವಂತ ನಿನ್ನ ಪೊರೆವಾ
ಧನ್ಯನಾಗೊ ಜಗಮಾನ್ಯನಾಗೊ ಧನ ಸೌಭಾಗ್ಯ ಕೊಡುವಾ
ಪರತ್ವರ ಹರಿ ವಿಠ್ಠಲಾ, ಪರತ್ವರ ವರ ವಿಠ್ಠಲಾ
ವಿಠ್ಠಲಾ ವಿಠ್ಠಲಾ

ವಿಠ್ಠಲ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ ।೨।
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ।೫।

Song: Hari Namave Chanda
Movie: Bhakta Kumbaara

Saturday, April 8, 2017

ಮಾನವ ಮೂಳೆ ಮಾಂಸದ

ಚಿತ್ರ: ಭಕ್ತ ಕುಂಬಾರ  
ರಚನೆ: ಹುಣಸೂರು ಕೃಷ್ಣಮೂರ್ತಿ  
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಪಿ. ಬಿ. ಶ್ರೀನಿವಾಸ್   

ಪರತತ್ವವನು ಬಲ್ಲ ಪಂಡಿತನು ನಾನಲ್ಲ
ಹರಿನಾಮ ಒಂದುಳಿದು ನನಗೇನು ತಿಳಿದಿಲ್ಲಾ
ನನಗೇನು ತಿಳಿದಿಲ್ಲಾ

ಮಾನವ ದೇಹವು ಮೂಳೆ ಮಾಂಸದ ತಡಿಕೇ 
ಮಾನವ ಮೂಳೆ ಮಾಂಸದ ತಡಿಕೇ
ಇದರ ಮೇಲಿದೇ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೇ
ಮಾನವ ಮೂಳೆ ಮಾಂಸದ ತಡಿಕೇ 

ನವ ಮಾಸಗಳು ಹೊಲಸಲಿ ಕಳೆದು, ಅ ಆ ...
ನವ ರಂಧ್ರಗಳಾ ಕಳೆದೂ ಬೆಳೆದೂ
ಬಂದಿದೆ ಭುವಿಗೇ ಈ ನರ ಗೊಂಬೇ
ನಂಬಲು ಏನಿದೇ ಸೌಭಾಗ್ಯವೆಂದೇ

ಮಾನವ ಮೂಳೆ ಮಾಂಸದ ತಡಿಕೇ
ದೇಹವೂ ಮೂಳೆ ಮಾಂಸದ ತಡಿಕೇ  

ಉಸಿರಾಡುವ ತನಕ, ನಾನು ನನದೆಂಬ ಮಮಕಾರ
ನಿಂತ ಮರುಗಳಿಗೆ, ಮಸಣದೆ ಸಂಸ್ಕಾರ 
ಮಣ್ಣಲಿ ಬೆರೆತೂ, ಮೆಲ್ಲಗೆ ಕೊಳೆತೂ
ಮುಗಿಯುವ ದೇಹಕೇ ವ್ಯಾಮೋಹವೇಕೇ

ಮಾನವ ಮೂಳೆ ಮಾಂಸದ ತಡಿಕೇ

ದೇಹವೂ ಮೂಳೆ ಮಾಂಸದ ತಡಿಕೇ  

ಬರುವಾಗ ಬೆತ್ತಲೇ, ಹೋಗುವಾಗ ಬೆತ್ತಲೇ 
ಬಂದು ಹೋಗುವ ನಡುವೇ, ಬರೀ ಕತ್ತಲೇ 
ಭಕ್ತಿಯ ಬೆಳಕೂ, ಬಾಳಿಗೆ ಬೇಕೂ 
ಮುಕ್ತಿಗೆ ವಿಠ್ಠಲನ ಕೊಂಡಾಡ ಬೇಕೂ 

ಮಾನವ ಮೂಳೆ ಮಾಂಸದ ತಡಿಕೇ


ದೇಹವು ಮೂಳೆ ಮಾಂಸದ ತಡಿಕೇ  
ಇದರ ಮೇಲಿದೇ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೇ

ಮಾನವ ಮೂಳೆ ಮಾಂಸದ ತಡಿಕೇ 

ವಿಠ್ಠಲ ವಿಠ್ಠಲ ಪಾಂಡುರಂಗ ವಿಠ್ಠಲ ।೩।
ಪಾಂಡುರಂಗ ವಿಠ್ಠಲ ।೨।

ಜೈ ಪುಂಡಲೀಕ ವರದೇ 
ಹರೀ ವಿಠ್ಠಲೇ 

Song: Maanva Moole Maamsada
Movie: Bhakta Kumbaara

ರಾಗ ಅನುರಾಗ

ಚಿತ್ರ: ಸನಾದಿ ಅಪ್ಪಣ್ಣ 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ  

ಗಂ:  ರಾಗ ಅನುರಾಗ ಶುಭಯೋಗ ಸೇರಿದೆ 
ಹೆ:   ರಾಗ ಅನುರಾಗ ಶುಭಯೋಗ ಸೇರಿದೆ 
ಗಂ:  ತಂದ ಅನುಬಂಧ ಆನಂದ ತಂದಿದೆ 
ಹೆ:   ತಂದ ಅನುಬಂಧ ಆನಂದ ತಂದಿದೇ, ರಾಗ 
ಗಂ:  ರಾಗ ಅನುರಾಗ ಶುಭಯೋಗ ಸೇರಿದೆ 

ಗಂ:  ರಾಗ ತಾಳ ಮಿಲನ ಸಂಗೀತವಾಗಿದೇ  
ಹೆ:   ಓ, ನಾದ ಲಾಸ್ಯ ಮಿಲನ ಹೊಸ ಭಾವ ಮೂಡಿದೇ 
       ಹೊಸ ಗೀತೆ ಹಾಡಿದೇ 
ಗಂ:  ಹೂವ ಗಂಧದಂತೆ ನಮ್ಮ ಜೀವ ಜೀವ ಸೇರಿ 
       ಉಯ್ಯಾಲೆ ಆಡಿದೇ 
       ರಾಗ ಅನುರಾಗ ಶುಭಯೋಗ ಸೇರಿದೆ 

ಹೆ:   ಹೃದಯವೀಣೆ ಮೀಟಿ ಹೊಸ ತಾನ ನುಡಿಸಿದೇ 
ಗಂ:  ಗಾನ ಗಂಗೆಯಲ್ಲಿ ತೇಲಾದಿದಂತಿದೇ, ಸುರಲೋಕ ಕಂಡಿದೇ 
ಹೆ:   ಗಂಗೆ ಶಿವನ ವರಿಸಿ ಶಿರವೇರಿದಂತೆ ನನ್ನ ಬಾಳಿಂದು ಆಗಿದೆ 
       ರಾಗ ಅನುರಾಗ ಶುಭಯೋಗ ಸೇರಿದೆ 

ಗಂ:  ಬಾಳ ನದಿಯು ಇಂದು ಹೊಸ ಹಾದಿ ಹಿಡಿದಿದೇ  
ಹೆ:   ಪ್ರಣಯವೆಂಬ ಒಲವ ಹಾಯಾಗಿ ಬಳಸಿದೇ 
ಗಂ:  ಪ್ರಣಯವೆಂಬ ಒಲವ ಹಾಯಾಗಿ ಬಳಸಿದೇ 
ಜೊ: ಉಲ್ಲಾಸ ತಂದಿದೆ 
ಗಂ:  ಹರುಷವೆಂಬ ಕಡಲ
ಹೆ:   ಅಲೆಅಲೆಯು ತೇಲಿಬಂದು
ಜೊ: ಈ ನದಿಯ ಸೇರಿದೇ, ರಾಗ 

ಗಂ:  ರಾಗ 
ಹೆ:   ರಾಗ ಅನುರಾಗ
ಗಂ:  ಶುಭಯೋಗ ಸೇರಿದೆ 
ಗಂ:  ತಂದ
ಗಂ:  ಅನುಬಂಧ
ಜೊ: ಆನಂದ ತಂದಿದೇ, ರಾಗ 

Song: Raaga Anuraaga
Movie: Sanaadi Appanna

ರಾಗ ಜೀವನ ರಾಗ

ಚಿತ್ರ: ಶ್ರುತಿ ಸೇರಿದಾಗ
ರಚನೆ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್ 

ಗಂ:  ರಾಗ ಜೀವನ ರಾಗ ।೨।
        ಪ್ರೇಮ ಸುಮವು ಅರಳಿದಾಗ ಮೋಹನ ರಾಗ 
        ಒಲಿದ ಜೀವ ಸೇರಿದಾಗ ಮೌನದ ರಾಗ 
ಹೆ:   ರಾಗ ಜೀವನ ರಾಗ ।೨।

ಹೆ:   ಕಂಗಳು ಬೆರೆತಾಗ ಆ ಅನುರಾಗ 
        ಹಾಡಿತು ಕಿವಿಯಲ್ಲಿ ಪ್ರೇಮದ ರಾಗ 
ಗಂ:  ಎದೆಯಲಿ ಆನಂದ ತುಂಬಲು ಆಗ ।೨।
        ದಿನವೂ ದಿನವೂ ನೂರು ನೂರು ಹೊಸ ರಾಗ 

ಹೆ:   ರಾಗ ಜೀವನ ರಾಗ
ಗಂ:  ರಾಗ ಜೀವನ ರಾಗ

ಹೆ:   ಮೈಯ್ಯಿಗೆ ಮೈ ಸೋಕಿದಾಗ, ಏತಕೊ ನನ್ನಲ್ಲಿ ಆವೇಗ 
ಗಂ:  ಆಸೆಯ ಬಾನಾಡಿ ಬಾನಿಗೆ ಜಿಗಿದಾಗ ।೨।
        ಸೇರುವ ಕಾತುರ ಮೂಡಿತು ಬೇಗ 
ಹೆ:   ಮೈಯ್ಯಿಗೆ ಮೈ ಸೋಕಿದಾಗ
ಗಂ:  ಏತಕೊ ನನ್ನಲ್ಲಿ ಆವೇಗ 

ಗಂ:  ಪ್ರೇಮದ ನುಡಿಯಿಂದು ಸವಿಯಾದ ರಾಗ 
        ಪ್ರೀತಿಯ ಹಾಡೆಲ್ಲ ಹಿತವಾದ ರಾಗ 
ಹೆ:   ಸರಸದ ನುಡಿಯಂದು ಸಂವಾದ ರಾಗ 
        ಪ್ರಣಯದ ಹಾಡೆಲ್ಲ ಹಿತವಾದ ರಾಗ 

ಗಂ:  ಬಿಸಿಲೆಲ್ಲ ಆಗ ಬೆಳದಿಂಗಳಾಗಿ 
        ಅನುಕ್ಷಣ ಹೊಸತನ ಚಿಗುರುವುದಾಗ 
ಹೆ:   ಮೈಯ್ಯಿಗೆ ಮೈ ಸೋಕಿದಾಗ
ಗಂ:  ಏತಕೊ ನನ್ನಲ್ಲಿ ಆವೇಗ

ಹೆ:   ರಾಗ ಜೀವನ ರಾಗ
ಗಂ:  ರಾಗ ಜೀವನ ರಾಗ

ಜೊ: ಪ್ರೇಮ ಸುಮವು ಅರಳಿದಾಗ ಮೋಹನ ರಾಗ 

        ಒಲಿದ ಜೀವ ಸೇರಿದಾಗ ಮೌನದ ರಾಗ 
        ರಾಗ ಜೀವನ ರಾಗ

Song: Raaga Jeevana Raaga
Movie: Shruti Seridaga

ನಗಲಾರದೇ ಅಳಲಾರದೇ

ಚಿತ್ರ: ಶ್ರುತಿ ಸೇರಿದಾಗ
ರಚನೆ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ 
ಗಾಯಕ: ಡಾ. ರಾಜಕುಮಾರ್

ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ ।೨।
ಬರಿಮಾತಲೀ ಹೇಳಲಾರದೇ ಮನದಾಳದ ನೋವ 

ದಿನಕೊಂದು ಬಣ್ಣ, ಕ್ಪಣಕೊಂದು ಬಣ್ಣ, ಏನೇನೋ ವೇಷ ಮಾತಲ್ಲಿ ಮೋಸ ।೨।
ಆ ಮಾತನ್ನೆಲ್ಲ ನಿಜವೆಂದು ನಂಬಿ ।೨।
ಮನದಾಸೆಯೇ...  ಮಣ್ಣಾಯಿತೇ... 
ಮನದಾಸೆಯೆ ಮಣ್ಣಾಯಿತೆ ಮನನೆಮ್ಮದಿ ದೂರಾಯಿತೇ 

ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ

ನಿಜವಾದ ಪ್ರೇಮ, ನಿಜವಾದ ಸ್ನೇಹ, ಅನುರಾಗವೇನೋ ಬಲ್ಲೋರು ಇಲ್ಲ ।೨।
ಬಾಳಲ್ಲೆ ನಟನೆ ಹೀಗೇಕೊ ಕಾಣೆ ।೨।
ಬದುಕಲ್ಲಿಯೇ... ಹುಡುಗಾಟವೇ... 
ಬದುಕಲ್ಲಿಯೆ ಹುಡುಗಾಟವೆ ಈ ಆಟಕೆ ಕೊನೆಯಿಲ್ಲವೇ 

ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ 
ಬರಿಮಾತಲೀ ಹೇಳಲಾರದೇ ಮನದಾಳದ ನೋವ 

Song: Nagalaarade Alalaarade
Movie: Shruti Seridaga

Friday, January 27, 2017

ಏಕೋ ಏನೋ ಈ ನನ್ನ ಮನವು

ಚಿತ್ರ: ಜ್ವಾಲಾಮುಖಿ 
ರಚನೆ: ಉದಯಶಂಕರ್ 
ಸಂಗೀತ: ಎಂ. ರಂಗರಾವ್ 
ಗಾಯಕ/ನಟ: ಡಾ. ರಾಜಕುಮಾರ್, ಬೆಂಗಳೂರು ಲತ 

ಗಂ:  ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ ।೨।
        ಎಂದು ಕಾಣೆ ನೂರೆಂಟು ಬಯಕೆ ।೨।
        ಹೊಸ ರಾಗವನ್ನು ಹಾಡಿದೆ 
ಹೆ:   ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ

        ಎಂದು ಕಾಣೆ ನೂರೆಂಟು ಬಯಕೆ ।೨।

        ಹೊಸ ರಾಗವನ್ನು ಹಾಡಿದೆ 
ಗಂ:  ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ

ಗಂ:  ಬಿಸಿಲಾದರೇನು ಮಳೆಯಾದರೇನು ಇಂದೇಕೋ ನನಗೆ ಹಾಯಾಗಿದೆ 
ಹೆ:   ಹೂವಾದರೇನು ಮುಳ್ಳಾದರೇನು ಇಂದೇಕೋ ನನಗೆಲ್ಲ ಸೊಗಸಾಗಿದೆ 
ಗಂ:  ಎದೆಯಲ್ಲಿ ಸಂತೋಷ ಕಡಲಾಗಿದೆ ।೨।
        ಮನದಲ್ಲಿ ಹೊಸ ಆಸೆ ಕುಣಿದಾಡಿದೆ 

ಹೆ:   ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ

ಹೆ:   ಬದುಕೆಲ್ಲ ಹೀಗೆ ಉಲ್ಲಾಸದಿಂದ ಒಂದಾಗಿ ಇರುವಾಸೆ ನನಗಾಗಿದೆ 
ಗಂ:  ಅನುರಾಗ ತಂದ ಆನಂದದಿಂದ ಈ ಬಾಳ ಸಂಗೀತ ಹಿತವಾಗಿದೆ 
ಹೆ:   ನೀನಾಡೊ ಮಾತೆಲ್ಲ ಸವಿಯಾಗಿದೆ ।೨।
        ಇಂದೇಕೊ ನನಗೆಲ್ಲ ಹೊಸದಾಗಿದೆ 

ಗಂ:  ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ
ಹೆ:   ಎಂದು ಕಾಣೆ ನೂರೆಂಟು ಬಯಕೆ ।೨।
        ಹೊಸ ರಾಗವನ್ನು ಹಾಡಿದೆ
ಗಂ:  ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ
ಹೆ:    ಆ... ಆ... 
ಗಂ:   ಆ... ಆ... 

Song: Eko Eno Ee Nanna Manavu
Movie: Jwalamukhi

ಗಂಗಾ ಯಮುನಾ ಸಂಗಮ

ಚಿತ್ರ: ಅನುರಾಗ ಅರಳಿತು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ 

ಗಂಗಾ ಯಮುನಾ ಸಂಗಮ ।೨।
ಈ ಪ್ರೇಮ, ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು

ಗಂಗಾ ಯಮುನಾ ಸಂಗಮ ।೨।
ಈ ಪ್ರೇಮ, ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು

ಹೆ:   ಅನುದಿನ ಸಂತೋಷ, ಅನುದಿನ ಉಲ್ಲಾಸ
        ಗೆಳೆಯ ನಿನ್ನ ಸೇರಿ ಪ್ರೇಮದ ಆವೇಷ
ಗಂ:  ಪ್ರಣಯದ ಕಣ್ಣೋಟ, ಸರಸದ ಚೆಲ್ಲಾಟ
        ದಿನವೂ ನೋಡಿ ನೋಡಿ ಒಲವಿನ ತುಂಟಾಟ
ಹೆ:   ಅರಿತೂ ಬೆರೆತೂ
ಗಂ:  ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ:   ಕೆನೆ ಹಾಲು ಜೇನು ಸೇರಿದಂತೆ ಈ ಬದುಕು

ಗಂ:  ಗಂಗಾ ಯಮುನಾ ಸಂಗಮ
ಹೆ:   ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ

ಗಂ:  ಬಾಳಲಿ ಇನ್ನೆಂದು, ಚಿಂತೆಯ ಮಾತಿಲ್ಲ
        ಗೆಳತೀ ಏನೇ ಕೇಳು, ಕೊಡುವೆ ನಾನೆಲ್ಲ
ಹೆ:   ಕೇಳೆನು ಏನನ್ನು, ಬಯಸೆನು ಇನ್ನೇನು
        ಗೆಳೆಯ ಎಂದೂ ಹೀಗೆ ಪ್ರೀತಿಸು ನನ್ನನು
ಗಂ:  ನಿನ್ನಾ ಸೇರೀ
ಹೆ:   ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂ:  ಕೆನೆ ಹಾಲು ಜೇನು ಸೇರಿದಂತೆ ಈ ಬದುಕು

ಹೆ:   ಗಂಗಾ ಯಮುನಾ ಸಂಗಮ
ಗಂ:  ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ
        ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ।೨।

Song: Ganga Yamuna Sangama
Movie: Anuraga Aralithu

ಸಾರ್ಥಕವಾಯಿತು ಚಿನ್ನ ನಿನ್ನ

ಚಿತ್ರ: ಅನುರಾಗ ಅರಳಿತು 
ರಚನೆ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ಗಾಯಕ: ಡಾ. ರಾಜಕುಮಾರ್ 

ಸಾರ್ಥಕವಾಯಿತು ।೨।
ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು ।೨।

ನಿನ್ನೀ ಕಂಗಳು ನೈದಿಲೆಯಂತೆ, ಸುಂದರ ಮೊಗವು ತಾವರೆಯಂತೆ
ಮುಂಗುರುಳೇನೋ ದುಂಬಿಗಳಂತೆ, ಒಳಗೇನಿದೆಯೋ ಎಂಬುದೆ ಚಿಂತೆ

ಸಾರ್ಥಕವಾಯಿತು, ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು

ಆ ಸಾವಿತ್ರಿ ನಿನ್ನ ನೋಡಿದರೆ, ಎದೆಯೇ ಹೊಡೆದು ಸಾಯುತಲಿದ್ದಳು 
ಪತಿ ಭಕ್ತಿಯಲಿ ನಿನಗೆನೆ ಇಲ್ಲ, ಓ ಕುಲ ನಾರಿ ಕುಬೇರನ ಕುವರಿ 

ಸಾರ್ಥಕವಾಯಿತು, ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು

ಕವಿ ವಾಲ್ಮೀಕಿ ಇದ್ದರೆ ಈಗ, ಹೊಸ ಕಾವ್ಯವನೇ ಬರೆಯುತಲಿದ್ದ 
ಭಾರತ ಬರೆದ ವ್ಯಾಸರು ನಿನ್ನ, ಕಂಡರೆ ಕಾಡಿಗೆ ಓಡುತಲಿದ್ದರು 

ಸಾರ್ಥಕವಾಯಿತು, ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು ।೨।

Song: Sarthakavayithu Chinna Ninna
Movie: Anuraga Aralithu

ನಿನ್ನಾ ಸ್ನೇಹಕೆ

ಚಿತ್ರ: ಭಾಗ್ಯವಂತರು
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಡಾ. ರಾಜಕುಮಾರ್,  ಪಿ. ಸುಶೀಲ

ಗಂ: ನಿನ್ನಾ ಸ್ನೇಹಕೆ, ನಾ ಸೋತುಹೋದೆನೂ
        ಎಲ್ಲಾ ದೇವರ ನಾ ಬೇಡಿಕೊಂಡೆನು
        ದೇವರ ವರವೋ, ಪುಣ್ಯದ ಫಲವೋ ಕಾಣೆನೂ
        ನಿನ್ನ ನಾ ಪಡೆದೆನು, ಓ
ಹೆ:  ನಿಮ್ಮಾ ಸ್ನೇಹಕೆ, ನಾ ಸೋತುಹೋದೆನೂ
        ಎಲ್ಲಾ ದೇವರ ನಾ ಬೇಡಿಕೊಂಡೆನು
        ದೇವರ ವರವೋ, ಪುಣ್ಯದ ಫಲವೋ ಕಾಣೆನೂ
        ನಿಮ್ಮ ನಾ ಪಡೆದೆನು

ಗಂ: ಓ, ನಿನ್ನಾ ಸ್ನೇಹಕೆ, ನಾ ಸೋತುಹೋದೆನೂ
        ಎಲ್ಲಾ ದೇವರ ನಾ ಬೇಡಿಕೊಂಡೆನು

ಗಂ: ನಿನ್ನಾ ನಾನು ಕಂಡಾಗ, ಮಲ್ಲಿಗೆಯಂತೆ ನಕ್ಕಾಗ
        ನನ್ನ ಮನದಲಿ ಆಸೆ ಮೂಡಿತು
ಹೆ:  ಅಂದೂ ನೀವು ಬಂದಾಗ, ಮಲ್ಲಿಗೆ ಹೂವು ತಂದಾಗ
        ನನ್ನ ಹೃದಯದ ವೀಣೆ ಹಾಡಿತು
ಗಂ: ಪ್ರೇಮದ ದೇವತೆ ಆದೆ, ನನ್ನಲ್ಲಿ ಒಂದಾಗಿ ಇಂದು ಸೇರಿದೆ
ಹೆ:  ಪ್ರೇಮದ ಮೂರುತಿ ಆದೆ, ನನ್ನಲ್ಲಿ ಆನಂದ ತಂದು ತುಂಬಿದೆ
ನನ್ನಲ್ಲಿ ಆನಂದ ತಂದು ತುಂಬಿದೆ

ಗಂ: ನಿನ್ನಾ ಸ್ನೇಹಕೆ, ನಾ ಸೋತುಹೋದೆನೂ
ಹೆ:  ಎಲ್ಲಾ ದೇವರ ನಾ ಬೇಡಿಕೊಂಡೆನು

ಹೆ:  ನನ್ನೀ ಬಾಳಿನ ದೀಪ, ನಿಮ್ಮದೆ ಈ ಪ್ರತಿರೂಪ
ಗಂ: ಆ.. ನಿನ್ನೀ ಕಂದನ ರೂಪ, ಬೆಳಗುವ ನಂದಾ ದೀಪ
ಹೆ:  ಮೈ ಮರೆಸಿ ನಮ್ಮ ಮನ ತಣಿಸಿ, ಹರುಷದ ಹೊನಲನು ಹರಿಸೀ
ಜೊ: ಇಂದು ಈ ಮುದ್ದು ಕಂದ, ತಂದ ನಮಗಾನಂದ

ಹೆ:  ಓ.. ನಿಮ್ಮಾ ಸ್ನೇಹಕೆ, ನಾ ಸೋತುಹೋದೆನೂ
ಗಂ: ಎಲ್ಲಾ ದೇವರ ನಾ ಬೇಡಿಕೊಂಡೆನು

ಗಂ: ಅಮ್ಮ ಎಂದು ಅಂದಾಗ, ಅಮ್ಮನ ಮೊಗವ ಕಂಡಾಗ
        ಏನೋ ಹರುಷವು ನನ್ನಾ ಮನದಲಿ

ಹೆ:  ಅಪ್ಪ ಎಂದು ಅಂದಾಗ,  ಪ್ರೀತಿ ಮಾತು ನುಡಿದಾಗ
        ಹಾಡಿ ಕುಣಿಯುವ ಆಸೆ ನನ್ನಲಿ
        ಯಂತಹ ಭಾಗ್ಯವ ಕಂಡೆ, ಜೇನಂತ ಮಾತಿಂದ ಹೃದಯ ತುಂಬಿದೆ
ಗಂ: ಯಂತಹ ಭಾಗ್ಯವ ತಂದೆ, ಹೆಣ್ಣಾಗಿ ಕಣ್ಣಾಗಿ ಮನೆಯ ತುಂಬಿದೆ
        ಹೆಣ್ಣಾಗಿ ಕಣ್ಣಾಗಿ ಮನವ ತುಂಬಿದೆ

ಗಂ: ನಿನ್ನಾ ಸ್ನೇಹಕೆ, ನಾ ಸೋತುಹೋದೆನೂ
ಹೆ:  ಎಲ್ಲಾ ದೇವರ ನಾ ಬೇಡಿಕೊಂಡೆನು
ಜೊ: ದೇವರ ವರವೋ, ಪುಣ್ಯದ ಫಲವೋ ಕಾಣೆನೂ
ಗಂ: ನಿನ್ನ ನಾ ಪಡೆದೆನು
ಹೆ:  ಓ, ಲಾ ಲ ಲಾ ಲ ಲಾ
ಗಂ: ಆ.. ಲಾ ಲ ಲಾ ಲ ಲಾ
ಹೆ:  ಲಾ ಲ ಲಾ ಲ ಲಾ
ಗಂ: ಆ.. ಲಾ ಲ ಲಾ ಲ ಲಾ

Song: Ninnaa Snehake
Movie: Bhagyavantaru