Monday, October 31, 2016

ನಾನೇ ರಾಜಕುಮಾರ

ಚಿತ್ರ: ಭಾಗ್ಯದ ಬಾಗಿಲು 
ರಚನೆ: ಚಿ. ಉದಯಶಂಕರ್ 
ಸಂಗೀತ: ವಿಜಯ ಭಾಸ್ಕರ್ 
ಗಾಯಕ: ಪಿ. ಬಿ. ಶ್ರೀನಿವಾಸ್ 

ನಾನೇ ರಾಜಕುಮಾರ ।೨।
ಕನ್ನಡ ತಾಯಿಯ ಪ್ರೇಮದ ಕುವರ 
ಅನೀತಿ ಅಳಿಸಿ ನ್ಯಾಯವ ಉಳಿಸಿ 
ಶಾಂತಿಯ ನಿಲಿಸಲು ಬಂದ ಕಿಶೋರ 
ಯಾರೋ, ನೀನ್ಯಾರೋ 
।। ಒಬ್ಬನ ಕೆಡಿಸಲು ನೀನ್ಯಾರೊ 
    ಹಣೆಬರಹವ ಅಳಿಸಲು ನೀನ್ಯಾರೊ ।।೨।।

ಹೆ ಹೇ... ನಾನೇ ರಾಜಕುಮಾರ
ಕನ್ನಡ ತಾಯಿಯ ಪ್ರೇಮದ ಕುವರ 
ಅನೀತಿ ಅಳಿಸಿ ನ್ಯಾಯವ ಉಳಿಸಿ 
ಶಾಂತಿಯ ನಿಲಿಸಲು ಬಂದ ಕಿಶೋರ 
ರಾಜ್ ಕುಮಾರ್ 

ಆರಡಿ ಮೂರಡಿ ನೆಲದಲ್ಲಿ, ಹಿಡಿ ಮಣ್ಣಾಗುವ ದೇಹದಲಿ 
ಇರುವ ದುರಾಸೆಗೆ ಮಿತಿಯಲ್ಲಿ, ತೀರದ ಬಯಕೆಗೆ ಕೊನೆಯಲ್ಲಿ 
ನಾನು ನೀನು ಎಲ್ಲಾ, ಸೇರಲೆ ಬೇಕು ಕೊನೆಗಲ್ಲಿ ।೨।
ಮೂರೇ ದಿನದ ಕಥೆಯಲ್ಲಿ, ದುರ್ಗುಣವೇಕೆ ನಿನಗಿಲ್ಲಿ 
ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್ ।೨।

ನಾನೇ ರಾಜಕುಮಾರ
ಕನ್ನಡ ತಾಯಿಯ ಪ್ರೇಮದ ಕುವರ 
ಅನೀತಿ ಅಳಿಸಿ ನ್ಯಾಯವ ಉಳಿಸಿ 
ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್ 

ಯುಗ ಯುಗದಿಂದಲು ನೆಡೆದಿಹುದು, ಒಬ್ಬನ ಒಬ್ಬನು ದೋಚುವುದು 
ದೋಚುವ ಜನತೆಗೆ ಸುಖವಿಲ್ಲ, ನ್ಯಾಯಕೆ ಎಂದಿಗೂ ಸಾವಿಲ್ಲ 
ಹೊನ್ನು ಮಣ್ಣು ಎಲ್ಲಾ, ಎಂದಿಗು ಒಬ್ಬನ ಸೊತ್ತಲ್ಲ ।೨।
ಒಬ್ಬನ ಸುಖಕೆ ಹಣವಲ್ಲ, ಧರ್ಮವ ಮರೆವುದು ಸರಿಯಲ್ಲ 
ಹಾಡು
।। ಭಜ ಗೋವಿಂದಂ ।೨।
    ಗೋವಿಂದಂ ಭಜ ಮೂಢಮತೆ ।।೨।।

ನಾನೇ ರಾಜಕುಮಾರ
ಕನ್ನಡ ತಾಯಿಯ ಪ್ರೇಮದ ಕುವರ 
ಅನೀತಿ ಅಳಿಸಿ ನ್ಯಾಯವ ಉಳಿಸಿ 
ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್ 

Song: Naane Rajakumara
Movie: Bhagyada Baagilu

No comments:

Post a Comment