Sunday, October 23, 2016

ಏನು ಮಾಡಲಿ ನಾನು

ಚಿತ್ರ: ತ್ರಿಮೂರ್ತಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ/ನಟ: ಡಾ. ರಾಜಕುಮಾರ್ 

ಎಲ್ಲ ಬಲ್ಲವರಿಲ್ಲ, ಬಲ್ಲವರು ಯಾರಿಲ್ಲ 
ಸುಮ್ಮನಿರಬಲ್ಲವರು ಇಲ್ಲವೇ ಇಲ್ಲ 

ಏನು ಮಾಡಲಿ ನಾನು ಏನು ಹೇಳಲಿ ।೨।
ಕಣ್ಣುಗಳಿದ್ದು ಕುರುಡರ ಹಾಗೆ ಹಲವರು ನೆಡೆಯುವರು
ಎಲ್ಲಾ ಬಲ್ಲೆನು ಎನ್ನುತ ಹೋಗಿ ಹಳ್ಳದಿ ಬೀಳುವರು
ಏನು ಮಾಡಲಿ ನಾನು ಏನು ಹೇಳಲಿ

ಎಂದೋ ದುಡುಕಿದ ತಪ್ಪಿಗೆ ಇಂದು ದಂಡನೆ ಹೊಂದಿರುವೆ 
ಯಾರೋ ಮಾಡಿದ ಮೋಸಕೆ ಇಂದು ನಾ ಬಲಿಯಾಗಿರುವೆ 
ಏಕೋ ಏನೋ ನೀ ದಯೆ ತೋರದೆ ಇನ್ನೂ ಅಳಿಸಿರುವೆ 
ನನ್ನ ಉಳಿಸುವರ ನೋವ ಅಳಿಸುವರ ಯಾರು ಕಾಣೆನು ಈ ಜಗದಿ 
ನಿನ್ನ ಹೊರೆತು ಬೇರಾರು ಇಲ್ಲವೊ ಕಾಪಾಡು ತಂದೆ 

ಏನು ಮಾಡಲಿ ನಾ ಏನು ಹೇಳಲಿ
ಏನು ಮಾಡಲಿ ನಾನು ಏನು ಹೇಳಲಿ

ಕರುಣಿಸಿ ನನ್ನೀ ಕೈಗಳ ಹಿಡಿದು ನೆಡೆಸುತ ಉದ್ಧರಿಸು 
ಜ್ಯೋತಿಯ ಬೆಳಗಿಸಿ ನನ್ನೀ ಬಾಳಿನ ಕತ್ತಲೆಯಾ ಅಳಿಸು 
ದ್ವೇಷವ ತೊಲಗಿಸು ನಿಜವನು ತೋರಿಸು ನನ್ನನು ನೀ ಉಳಿಸು 
ಎಲ್ಲ ಮರೆತಿರುವೆ ನಿನ್ನ ನಂಬಿರುವೆ ತಂದೆ ಶರಣು ನಾ ಬಂದಿರುವೆ 
ನನ್ನ ಮನೆಯನು ನಿಲ್ಲಿಸು ಎಂದು ನಾ ಬೇಡುತಿರುವೆ 

ಏನು ಮಾಡಲಿ ನಾ ಏನು ಹೇಳಲಿ
ಏನು ಮಾಡಲಿ ನಾನು ಏನು ಹೇಳಲಿ
ಕಣ್ಣುಗಳಿದ್ದು ಕುರುಡರ ಹಾಗೆ ಹಲವರು ನೆಡೆಯುವರು
ಎಲ್ಲಾ ಬಲ್ಲೆನು ಎನ್ನುತ ಹೋಗಿ ಹಳ್ಳದಿ ಬೀಳುವರು
ಏನು ಮಾಡಲಿ ನಾ ಏನು ಹೇಳಲಿ ।೨।

Song: Enu Maadali, Naanu Enu Helali 
Movie: Trimurthy

No comments:

Post a Comment