Sunday, October 23, 2016

ಆ ರತಿಯೇ ಧರೆಗಿಳಿದಂತೆ

ಚಿತ್ರ: ಧ್ರುವತಾರೆ
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ. ರಾಜಕುಮಾರ್, ಬೆಂಗಳೂರು ಲತ

ಗಂ: ।। ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ
            ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂ ಬಾಣವಾಯಿತೋ ಎನಿಸುತಿದೆ ।।೨।।

ಗಂ:  ಮಾಮರ ತೂಗುತ, ಚಾಮರ ಹಾಕುತ, ಪರಿಮಳ ಎಲ್ಲೆಡೆ ಚೆಲ್ಲುತಿರೇ 
        ಗಗನದ ಅಂಚಲಿ, ರಂಗನು ಚೆಲ್ಲುತ, ಸಂಜೆಯು ನಾಟ್ಯವ ಆಡುತಿರೇ
        ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ, ಕೋಗಿಲೆಯೂ ನಲಿಯುತಿರೆ
ಹೆ:   ಲಾ ಲ ಲ ಲಾ, ಲ ಲ ಲ ಲ ಲಾ

ಗಂ:  ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ
        ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂ ಬಾಣವಾಯಿತೋ ಎನಿಸುತಿದೆ

ಗಂ:  ಪ್ರೇಮದ ಭಾವಕೆ, ಪ್ರೀತಿಯ ರಾಗಕೆ, ಮೌನವೆ ಗೀತೆಯ ಹಾಡುತ್ತಿರೇ
        ಸರಸದ ಸ್ನೇಹಕೆ, ಒಲವಿನ ಕಾಣಿಕೆ, ನೀಡಲು ಅದರವು ಅರಳುತಿರೇ
        ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು
        ಪ್ರೇಮಿಗಳೂ ನಲಿಯುತಿರೆ ।೨।

ಗಂ:  ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ
        ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
        ಹೂ ಬಾಣವಾಯಿತೋ ಎನಿಸುತಿದೆ ।೪।

Song: Aa Rathiye Dharegilidante
Movie: Dhurvathare

2 comments: