Wednesday, September 14, 2016

ಯಾರೇ ಕೂಗಾಡಲಿ, ಊರೇ ಹೋರಾಡಲಿ

ಚಿತ್ರ                : ಸಂಪತ್ತಿಗೆ ಸವಾಲ್
ರಚನೆ              : ಚಿ ಉದಯಶಂಕರ್
ಸಂಗೀತ           : ಜಿ. ಕೆ. ವೆಂಕಟೇಶ್
ಗಾಯಕ/ನಟ     : ಡಾ. ರಾಜಕುಮಾರ್

ಯಾರೇ ಕೂಗಾಡಲಿ, ಊರೇ  ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ, ಎಮ್ಮೆ ನಿನಗೆ ಸಾಟಿಯಿಲ್ಲ 
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ, ಅಳುಕದೆ ಮುಂದೇ ಸಾಗುವೆ
ಅರೆ ವೈ ಅರೆ ವೈ ಅರೆ ವೈ ಟುರ್ರ್ ಬ್ಯಾ!

ಗುಣದಲ್ಲಿ ನೀ ಉಪಕಾರಿ ಮಾನವಗೆ ನೀ ಸಹಕಾರಿ ।೨।
ಕಸವನ್ನೇ ತಿಂದರು ಕೊನೆಗೆ, ಹಾಲನ್ನೇ ನೀಡುವೆ ನಮಗೆ 
ಹಾಲನ್ನು ಕುಡಿದಾ ಜನರು, ವಿಷವನ್ನೇ ಕಕ್ಕುತಲಿಹರು ।೨।
ಸದಾ ರೋಷ, ಸದಾ ದ್ವೇಷ, ಅದಕ್ಕೇ ಈಗಿದೆ ಈ ದೇಶ 

ಯಾರೇ ಕೂಗಾಡಲಿ, ಊರೇ  ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ, ಎಮ್ಮೆ ನಿನಗೆ ಸಾಟಿಯಿಲ್ಲ 
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ, ಅಳುಕದೆ ಮುಂದೇ ಸಾಗುವೆ
ಅರೆ ವೈ ಅರೆ ವೈ ಅರೆ ವೈ ಟುರ್ರ್ ಬ್ಯಾ!

ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು ।೨।
ಉಪಕಾರವ ಮಾಡಲಾರ, ಬದುಕಿದರೆ ಸಹ್ಹಿಸಲಾರ
ಸತ್ಯಕ್ಕೆ ಗೌರವವಿಲ್ಲ, ವಂಚನೆಗೆ ಪೂಜ್ಯತೆ ಎಲ್ಲ ।೨।
ಇದೇ ನೀತಿ ಇದೇ ರೀತಿ, ಇನ್ನೆಲ್ಲಿ ಗುರು ಹಿರಿಯರ ಭೀತಿ 

ಯಾರೇ ಕೂಗಾಡಲಿ, ಊರೇ  ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ, ಎಮ್ಮೆ ನಿನಗೆ ಸಾಟಿಯಿಲ್ಲ 
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ, ಅಳುಕದೆ ಮುಂದೇ ಸಾಗುವೆ
ಅರೆ ವೈ ಅರೆ ವೈ ಅರೆ ವೈ ಟುರ್ರ್ ಬ್ಯಾ!

Movie: Sampattige Savaal Song: Yaare Koogadali Singer / Actor: Dr. Rajkumar

No comments:

Post a Comment