ಚಿತ್ರ: ಬಬ್ರುವಾಹನ
ರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕರು: ಪಿ. ಬಿ. ಶ್ರೀನಿವಾಸ್, ಡಾ. ರಾಜಕುಮಾರ್
ಸಂಭಾಷಣೆ:
ಬಬ್ರುವಾಹನ: ಏನು ಪಾರ್ಥಾ, ಕೆಂಗಣ್ಣಿನಿಂದ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂಧಿಸಿದ ಮರುಕ್ಷಣವೆ, ನಿನ್ನ ಪುಣ್ಯವೆಲ್ಲಾ ಹುರಿದುಹೋಗಿ, ಪಾಪದ ಮೂಟೆ ಹೆಗಲು ಹತ್ತಿದೆ. ಮ್! ಎತ್ತು ನಿನ್ನ ಗಾಂಢೀವ, ಹೂಡು ಪರಮೇಶ್ವರನು ಕೊಟ್ಟ ಆ ಪಾಶುಪತಾಸ್ತ್ರ. ಶಿವನನ್ನು ಗೆದ್ದ ಶೌರ್ಯ ನನಗೂ ಸ್ವಲ್ಪ ತಿಳಿಯಲಿ. ಅಥವ ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರವ ನನ್ನಿಂದಲೇ ಮಣ್ಣಾಗಲಿ.
ಅರ್ಜುನ: ಮದಾಂಧ! ಅವರಿವರನ್ನು ಕೊಂದೆ ಎಂಬ ಅಹಂಕಾರದಿಂದ ಕೊಬ್ಬಿರುವ ಮೂರ್ಖ. ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನ್ನು ಭೇಧಿಸಿ, ರಣರಂಗದಲ್ಲಿ ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೊ.
ಹಾಡು:
ಬಬ್ರುವಾಹನ:
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ
ಸಮರದೊಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮಾ
ಎಲ್ಲದಕು ಕಾರಣನು ಶ್ರೀ ಕೃಷ್ಣ ಪರಮಾತ್ಮಾ
ಹಗಲಿರುಳು ನೆರಳಂತೆ ತಲೆಕಾಯಿದು ಕಾಪಾಡಿ
ಜಯವ ತಂದಿಟ್ಟ ಆ ಯದುನಂದನಾ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನಾ
ಅರ್ಜುನ:
ಅಸಹಾಯ ಶೂರ ನಾ ಅಕ್ಷೀಣ ಬಲನೊ
ಹರನೊಡನೆ ಹೋರಾಡಿ ಪಶುಪತವಂ ಪಡೆದವನೋ
ಅಗ್ರಹ್ಯಾದೊಳಗುರಂಗೊ ಅರಿಗರಂ ವಿಗ್ರಹಿಸೊ ವ್ಯಾಘ್ರನೀವನೊ, ಉಗ್ರಪ್ರತಾಪೀ
ಬಬ್ರುವಾಹನ:
ಓ ಹೊ ಹೊ ಹೋ ಉಗ್ರಪ್ರತಾಪಿ ಹಾಂ!
ಸಭೆಯೊಳಗೆ ದ್ರೌಪದಿಯ ಸೀರೆಯನು ಸೆಳೆವಾಗ
ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯಾ
ನೂಪುರಂಗಳ ಕಟ್ಟಿ ನಟಿಸಿ ತಕಥೈ ಎಂದು ನಾಟ್ಯ ಕಳಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇಡಿಸದೆ ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೊ
ಖಂಡಿಸದೆ ಉಳಿಸುವೆ ಹೋಗೋ ಹೊಗೆಲೊ ಶಿಖಂಡೀ
ಅರ್ಜುನ:
ಫಡಫಡಾ ಶಿಖಂಡಿ ಎಂದಡಿಗಡಿಗೆ ನುಡಿಯ ಬೇಡೋ ಮೂಢ
ಭಂಡರದೆ ಗುಂಡಿಗೆಯ ಖಂಡಿಸುತ ರಣಚಂಡಿಗೌತಣವೀವ ಈ ಗಾಂಢೀವಿ
ಗಂಡುಗಲಿಗಳ ಗಂಡ ಉದ್ದಂಡ ಭೂಮಂಡಲದೊಳ ಖಂಡ ಕೀರ್ತಿ ಪ್ರಚಂಡ
ಬಬ್ರುವಾಹನ:
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗಾ
ಹೂಡು ಬಾಣಗಳ ಮಾಡುವೆ ಮಾನಭಂಗಾ
ಅರ್ಜುನ:
ಕದನದೊಳ್ ಕಲಿ ಪಾರ್ಥನಂ ಕೆಣಕಿ ಉಳಿದವರಿಲ್ಲ
ಬಬ್ರುವಾಹನ:
ಅಬ್ಬರಿಸಿ ಬೊಬ್ಬಿರಿದಿರಿಲ್ಲಾರಿಗೂ ಭಯವಿಲ್ಲಾ
ಅರ್ಜುನ:
ಆರ್ಭಟಿಸಿ ಬರುತಿದೆ ನೋಡು ಅಂತಕನಾಹ್ವಾನ
ಬಬ್ರುವಾಹನ:
ಅಂತಕನಿಗೆ ಅಂತಕನು ಈ ಬಬ್ರುವಾಹನಾ
Song: Yaaru Thiliyaru Ninna
Movie: Babruvahana
ರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕರು: ಪಿ. ಬಿ. ಶ್ರೀನಿವಾಸ್, ಡಾ. ರಾಜಕುಮಾರ್
ಸಂಭಾಷಣೆ:
ಬಬ್ರುವಾಹನ: ಏನು ಪಾರ್ಥಾ, ಕೆಂಗಣ್ಣಿನಿಂದ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂಧಿಸಿದ ಮರುಕ್ಷಣವೆ, ನಿನ್ನ ಪುಣ್ಯವೆಲ್ಲಾ ಹುರಿದುಹೋಗಿ, ಪಾಪದ ಮೂಟೆ ಹೆಗಲು ಹತ್ತಿದೆ. ಮ್! ಎತ್ತು ನಿನ್ನ ಗಾಂಢೀವ, ಹೂಡು ಪರಮೇಶ್ವರನು ಕೊಟ್ಟ ಆ ಪಾಶುಪತಾಸ್ತ್ರ. ಶಿವನನ್ನು ಗೆದ್ದ ಶೌರ್ಯ ನನಗೂ ಸ್ವಲ್ಪ ತಿಳಿಯಲಿ. ಅಥವ ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರವ ನನ್ನಿಂದಲೇ ಮಣ್ಣಾಗಲಿ.
ಅರ್ಜುನ: ಮದಾಂಧ! ಅವರಿವರನ್ನು ಕೊಂದೆ ಎಂಬ ಅಹಂಕಾರದಿಂದ ಕೊಬ್ಬಿರುವ ಮೂರ್ಖ. ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನ್ನು ಭೇಧಿಸಿ, ರಣರಂಗದಲ್ಲಿ ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೊ.
ಹಾಡು:
ಬಬ್ರುವಾಹನ:
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ
ಸಮರದೊಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮಾ
ಎಲ್ಲದಕು ಕಾರಣನು ಶ್ರೀ ಕೃಷ್ಣ ಪರಮಾತ್ಮಾ
ಹಗಲಿರುಳು ನೆರಳಂತೆ ತಲೆಕಾಯಿದು ಕಾಪಾಡಿ
ಜಯವ ತಂದಿಟ್ಟ ಆ ಯದುನಂದನಾ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನಾ
ಅರ್ಜುನ:
ಅಸಹಾಯ ಶೂರ ನಾ ಅಕ್ಷೀಣ ಬಲನೊ
ಹರನೊಡನೆ ಹೋರಾಡಿ ಪಶುಪತವಂ ಪಡೆದವನೋ
ಅಗ್ರಹ್ಯಾದೊಳಗುರಂಗೊ ಅರಿಗರಂ ವಿಗ್ರಹಿಸೊ ವ್ಯಾಘ್ರನೀವನೊ, ಉಗ್ರಪ್ರತಾಪೀ
ಬಬ್ರುವಾಹನ:
ಓ ಹೊ ಹೊ ಹೋ ಉಗ್ರಪ್ರತಾಪಿ ಹಾಂ!
ಸಭೆಯೊಳಗೆ ದ್ರೌಪದಿಯ ಸೀರೆಯನು ಸೆಳೆವಾಗ
ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯಾ
ನೂಪುರಂಗಳ ಕಟ್ಟಿ ನಟಿಸಿ ತಕಥೈ ಎಂದು ನಾಟ್ಯ ಕಳಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇಡಿಸದೆ ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೊ
ಖಂಡಿಸದೆ ಉಳಿಸುವೆ ಹೋಗೋ ಹೊಗೆಲೊ ಶಿಖಂಡೀ
ಅರ್ಜುನ:
ಫಡಫಡಾ ಶಿಖಂಡಿ ಎಂದಡಿಗಡಿಗೆ ನುಡಿಯ ಬೇಡೋ ಮೂಢ
ಭಂಡರದೆ ಗುಂಡಿಗೆಯ ಖಂಡಿಸುತ ರಣಚಂಡಿಗೌತಣವೀವ ಈ ಗಾಂಢೀವಿ
ಗಂಡುಗಲಿಗಳ ಗಂಡ ಉದ್ದಂಡ ಭೂಮಂಡಲದೊಳ ಖಂಡ ಕೀರ್ತಿ ಪ್ರಚಂಡ
ಬಬ್ರುವಾಹನ:
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗಾ
ಹೂಡು ಬಾಣಗಳ ಮಾಡುವೆ ಮಾನಭಂಗಾ
ಅರ್ಜುನ:
ಕದನದೊಳ್ ಕಲಿ ಪಾರ್ಥನಂ ಕೆಣಕಿ ಉಳಿದವರಿಲ್ಲ
ಬಬ್ರುವಾಹನ:
ಅಬ್ಬರಿಸಿ ಬೊಬ್ಬಿರಿದಿರಿಲ್ಲಾರಿಗೂ ಭಯವಿಲ್ಲಾ
ಅರ್ಜುನ:
ಆರ್ಭಟಿಸಿ ಬರುತಿದೆ ನೋಡು ಅಂತಕನಾಹ್ವಾನ
ಬಬ್ರುವಾಹನ:
ಅಂತಕನಿಗೆ ಅಂತಕನು ಈ ಬಬ್ರುವಾಹನಾ
Song: Yaaru Thiliyaru Ninna
Movie: Babruvahana
Wow wow wow......
ReplyDeleteGoosebumps in every single word....
ಅಣ್ಣಾವ್ರಿಗೆ ಜೈ