ಚಿತ್ರ: ಬಬ್ರುವಾಹನ
ರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕರು: ಪಿ. ಬಿ. ಶ್ರೀನಿವಾಸ್, ಡಾ. ರಾಜಕುಮಾರ್
ಸಂಭಾಷಣೆ:
ಬಬ್ರುವಾಹನ: ಏನು ಪಾರ್ಥಾ, ಕೆಂಗಣ್ಣಿನಿಂದ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂಧಿಸಿದ ಮರುಕ್ಷಣವೆ, ನಿನ್ನ ಪುಣ್ಯವೆಲ್ಲಾ ಹುರಿದುಹೋಗಿ, ಪಾಪದ ಮೂಟೆ ಹೆಗಲು ಹತ್ತಿದೆ. ಮ್! ಎತ್ತು ನಿನ್ನ ಗಾಂಢೀವ, ಹೂಡು ಪರಮೇಶ್ವರನು ಕೊಟ್ಟ ಆ ಪಾಶುಪತಾಸ್ತ್ರ. ಶಿವನನ್ನು ಗೆದ್ದ ಶೌರ್ಯ ನನಗೂ ಸ್ವಲ್ಪ ತಿಳಿಯಲಿ. ಅಥವ ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ.
ಅರ್ಜುನ: ಮದಾಂಧ! ಅವರಿವರನ್ನು ಕೊಂದೆ ಎಂಬ ಅಹಂಕಾರದಿಂದ ಕೊಬ್ಬಿರುವ ಮೂರ್ಖ. ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನ್ನು ಭೇಧಿಸಿ, ರಣರಂಗಣದಲ್ಲಿ ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೊ.
ರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕರು: ಪಿ. ಬಿ. ಶ್ರೀನಿವಾಸ್, ಡಾ. ರಾಜಕುಮಾರ್
ಸಂಭಾಷಣೆ:
ಬಬ್ರುವಾಹನ: ಏನು ಪಾರ್ಥಾ, ಕೆಂಗಣ್ಣಿನಿಂದ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂಧಿಸಿದ ಮರುಕ್ಷಣವೆ, ನಿನ್ನ ಪುಣ್ಯವೆಲ್ಲಾ ಹುರಿದುಹೋಗಿ, ಪಾಪದ ಮೂಟೆ ಹೆಗಲು ಹತ್ತಿದೆ. ಮ್! ಎತ್ತು ನಿನ್ನ ಗಾಂಢೀವ, ಹೂಡು ಪರಮೇಶ್ವರನು ಕೊಟ್ಟ ಆ ಪಾಶುಪತಾಸ್ತ್ರ. ಶಿವನನ್ನು ಗೆದ್ದ ಶೌರ್ಯ ನನಗೂ ಸ್ವಲ್ಪ ತಿಳಿಯಲಿ. ಅಥವ ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ.
ಅರ್ಜುನ: ಮದಾಂಧ! ಅವರಿವರನ್ನು ಕೊಂದೆ ಎಂಬ ಅಹಂಕಾರದಿಂದ ಕೊಬ್ಬಿರುವ ಮೂರ್ಖ. ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನ್ನು ಭೇಧಿಸಿ, ರಣರಂಗಣದಲ್ಲಿ ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೊ.
ಹಾಡು:
ಬಬ್ರುವಾಹನ:
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ
ಸಮರದೊಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮಾ
ಎಲ್ಲದಕು ಕಾರಣನು ಶ್ರೀ ಕೃಷ್ಣ ಪರಮಾತ್ಮಾ
ಹಗಲಿರುಳು ನೆರಳಂತೆ ತಲೆಕಾಯಿದು ಕಾಪಾಡಿ
ಜಯವ ತಂದಿಟ್ಟ ಆ ಯದುನಂದನಾ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನಾ
ಅರ್ಜುನ:
ಅಸಹಾಯ ಶೂರ ನಾ ಅಕ್ಷೀಣ ಬಲನೊ
ಹರನೊಡನೆ ಹೋರಾಡಿ ಪಶುಪತವಂ ಪಡೆದವನೋ
ಅಗ್ರಹ್ಯಾದೊಳಗುರಂಗೊ ಅರಿಗರಂ ವಿಗ್ರಹಿಸೊ ವ್ಯಾಘ್ರನೀವನೊ, ಉಗ್ರಪ್ರತಾಪೀ
ಬಬ್ರುವಾಹನ:
ಓ ಹೊ ಹೊ ಹೋ ಉಗ್ರಪ್ರತಾಪಿ ಹಾಂ!
ಸಭೆಯೊಳಗೆ ದ್ರೌಪದಿಯ ಸೀರೆಯನು ಸೆಳೆವಾಗ
ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯಾ
ನೂಪುರಂಗಳ ಕಟ್ಟಿ ನಟಿಸಿ ತಕಥೈ ಎಂದು ನಾಟ್ಯ ಕಳಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇಡಿಸದೆ ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೊ
ಖಂಡಿಸದೆ ಉಳಿಸುವೆ ಹೋಗೋ ಹೊಗೆಲೊ ಶಿಖಂಡೀ
ಅರ್ಜುನ:
ಫಡಫಡಾ ಶಿಖಂಡಿ ಎಂದಡಿಗಡಿಗೆ ನುಡಿಯ ಬೇಡೋ ಮೂಢ
ಭಂಡರದೆ ಗುಂಡಿಗೆಯ ಖಂಡಿಸುತ ರಣಚಂಡಿಗೌತಣವೀವ ಈ ಗಾಂಢೀವಿ
ಗಂಡುಗಲಿಗಳ ಗಂಡ ಉದ್ದಂಡ ಭೂಮಂಡಲದೊಳ ಖಂಡ ಕೀರ್ತಿ ಪ್ರಚಂಡ
ಬಬ್ರುವಾಹನ:
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗಾ
ಹೂಡು ಬಾಣಗಳ ಮಾಡುವೆ ಮಾನಭಂಗಾ
ಅರ್ಜುನ:
ಕದನದೊಳ್ ಕಲಿ ಪಾರ್ಥನಂ ಕೆಣಕಿ ಉಳಿದವರಿಲ್ಲ
ಬಬ್ರುವಾಹನ:
ಅಬ್ಬರಿಸಿ ಬೊಬ್ಬಿರಿದಿರಿಲ್ಲಾರಿಗೂ ಭಯವಿಲ್ಲಾ
ಅರ್ಜುನ:
ಆರ್ಭಟಿಸಿ ಬರುತಿದೆ ನೋಡು ಅಂತಕನಾಹ್ವಾನ
ಬಬ್ರುವಾಹನ:
ಅಂತಕನಿಗೆ ಅಂತಕನು ಈ ಬಬ್ರುವಾಹನಾ
ಅರ್ಜುನ:
ಮುಚ್ಚುಬಾಯಿ ಜಾಲಿನಿಯ ಮಗನೆ
ಬಬ್ರುವಾಹನ:
ಏ ಪಾರ್ಥ! ನನ್ನ ತಾಯಿ ಜಾಲಿನಿಯೊ ಪತಿವ್ರತೆಯೋ ಎಂಬ ನಿರ್ಧಾರಕ್ಕಾಗಿಯೇ ಈ ಯುಧ್ಧ
ಏ ಪಾರ್ಥ! ನನ್ನ ತಾಯಿ ಜಾಲಿನಿಯೊ ಪತಿವ್ರತೆಯೋ ಎಂಬ ನಿರ್ಧಾರಕ್ಕಾಗಿಯೇ ಈ ಯುಧ್ಧ
ಅರ್ಜುನ:
ಮುಗಿಯಿತು ನಿನ್ನ ಆಯಸ್ಸು
ಮುಗಿಯಿತು ನಿನ್ನ ಆಯಸ್ಸು
ಬಬ್ರುವಾಹನ:
ಅದನ್ನ ಮುಗಿಸೋದಕ್ಕೆ ಯಾರಿದ್ದಾರೆ ನಿನ್ನ ಸಹಾಯಕ್ಕೆ. ಶಿಖಂಡಿನ ಮುಂದೆ ನಿಲ್ಸಿ ಭೀಷ್ಮನ್ನ ಕೊಂದ ಹಾಗೆ ನನ್ನ ಕೊಲ್ಲೋದಕ್ಕೆ ಇಲ್ಲಿ ಯಾವ ಶಿಖಂಡಿನೂ ಇಲ್ಲ. ಧರ್ಮರಾಯನ ಬಾಯಲ್ಲಿ ಅಬದ್ಧ ನುಡಿಸಿ ದ್ರೋಣಾಚಾರ್ಯರನ್ನು ಕೊಂದ ಹಾಗೆ ನನ್ನ ಕೊಲ್ಲಲು, ಸುಳ್ಳು ಹೇಳೋದಕ್ಕೆ ಧರ್ಮರಾಯ ಇಲ್ಲಿಲ್ಲ. ರಥದ ಚಕ್ರ ಮುರಿದಿದ್ದಾಗ ಕವಚ ಕುಂಡಲ ದಾನ ಪಡೆದು ಕರ್ಣನ್ನ ಕೊಲ್ಸಿದ್ದಾಗೆ ನನ್ನ ಕೊಲ್ಸೋದಕ್ಕೆ ನಿನ್ನ ಶ್ರೀಕೃಷ್ಣ ಪರಮಾತ್ಮ ಇಲ್ಲಿಲ್ಲ. ಇಲ್ಲಿರೋದು ಪತಿವ್ರತೆಯ ಮಗನಾದ ನಾನು, ಪತ್ನಿ ದ್ರೋಹಿಯಾದ ನೀನು.
Song: Yaaru Thiliyaru Ninna
Movie: Babruvahana
ಅದನ್ನ ಮುಗಿಸೋದಕ್ಕೆ ಯಾರಿದ್ದಾರೆ ನಿನ್ನ ಸಹಾಯಕ್ಕೆ. ಶಿಖಂಡಿನ ಮುಂದೆ ನಿಲ್ಸಿ ಭೀಷ್ಮನ್ನ ಕೊಂದ ಹಾಗೆ ನನ್ನ ಕೊಲ್ಲೋದಕ್ಕೆ ಇಲ್ಲಿ ಯಾವ ಶಿಖಂಡಿನೂ ಇಲ್ಲ. ಧರ್ಮರಾಯನ ಬಾಯಲ್ಲಿ ಅಬದ್ಧ ನುಡಿಸಿ ದ್ರೋಣಾಚಾರ್ಯರನ್ನು ಕೊಂದ ಹಾಗೆ ನನ್ನ ಕೊಲ್ಲಲು, ಸುಳ್ಳು ಹೇಳೋದಕ್ಕೆ ಧರ್ಮರಾಯ ಇಲ್ಲಿಲ್ಲ. ರಥದ ಚಕ್ರ ಮುರಿದಿದ್ದಾಗ ಕವಚ ಕುಂಡಲ ದಾನ ಪಡೆದು ಕರ್ಣನ್ನ ಕೊಲ್ಸಿದ್ದಾಗೆ ನನ್ನ ಕೊಲ್ಸೋದಕ್ಕೆ ನಿನ್ನ ಶ್ರೀಕೃಷ್ಣ ಪರಮಾತ್ಮ ಇಲ್ಲಿಲ್ಲ. ಇಲ್ಲಿರೋದು ಪತಿವ್ರತೆಯ ಮಗನಾದ ನಾನು, ಪತ್ನಿ ದ್ರೋಹಿಯಾದ ನೀನು.
Song: Yaaru Thiliyaru Ninna
Movie: Babruvahana
Wow wow wow......
ReplyDeleteGoosebumps in every single word....
ಅಣ್ಣಾವ್ರಿಗೆ ಜೈ