Saturday, September 24, 2016

ಮರೆಯದಿರು ಸ್ನೇಹ

ಚಿತ್ರ: ಪ್ರತಿಧ್ವನಿ 
ರಚನೆ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯಕ: ಪಿ. ಬಿ. ಶ್ರೀನಿವಾಸ್ 

ಮರೆಯದಿರು ಸ್ನೇಹ ಬಗೆಯದಿರು ದ್ರೋಹ 
ನ್ಯಾಯವನ್ನು ಉಳಿಸು ಅನ್ಯಾಯವನ್ನು ಅಳಿಸು 
ಎಂದೂ ಎಂದೆಂದೂ 

ಬಾಳಿನಲೀ ಗುರಿಯ ಸಾಧಿಸುವಾ ಛಲವ 
ಬಿಡದಂತೆ ನೆಡೆಯಬೇಕು ಅದಕಾಗಿ ದುಡಿಯಬೇಕು 
ಎಂದೂ ಎಂದೆಂದೂ 

ಸತ್ಯವನೇ ನುಡಿದು ಧರ್ಮದಲೇ ನೆಡೆದು
ಸರಿಯಾದ ದಾರಿಯಲ್ಲಿ ಗುರಿಯನ್ನು ಸೇರಬೇಕು 
ಎಂದೂ ಎಂದೆಂದೂ 

ಮರೆಯದಿರು ಸ್ನೇಹ ಬಗೆಯದಿರು ದ್ರೋಹ 
ಯುಡಿಲೀ ।೩।

Song: Mareyadiru Sneha
Movie: Pratidwani

1 comment:

  1. ರಾಮಾಯಣ, ಮಹಾಭಾರತ, ಭಾಗದ್ವದ್ಗೀತಾದ ಸಾರಾಂಶ ಎಲ್ಲಾ ಈ ಗೀತೆಯಲ್ಲಿ ಇದೇ. ಕನ್ನಡ ಭಾಷೆ ಎಂತ ಮದುರ ಭಾಷೆ ಮತ್ತು ಉದಯಶಂಕರ್ ಇಂತಹ ಧೀಮಂತ ಗೀತ ರಚನೆಕಾರರು ರಾಜಕುಮಾರ್ ರಂತ ನಟರನ್ನು ಪಡೆದ ನಾವೆಷ್ಟು ಧನ್ಯರು

    ReplyDelete