Saturday, September 24, 2016

ಯಾರು ಏನು ಮಾಡುವರು

ಚಿತ್ರ: ಕ್ರಾಂತಿವೀರ 
ರಚನೆ: ಚಿ. ಉದಯಶಂಕರ್ 
ಸಂಗೀತ: ಸತ್ಯಂ 
ಗಾಯಕ: ಪಿ. ಬಿ. ಶ್ರೀನಿವಾಸ್ 

ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು 
ಸತ್ಯದ ಹಾದಿಯಲಿರುವಾಗ, ಧರ್ಮವೆ ರಕ್ಷಿಸುತ್ತಿರುವಾಗ 
ಈ ನಾಡಿಗೆ ನಾಡೆ ಹಿಂದಿರುವಾಗ, ಕನ್ನಡ ನನ್ನುಸಿರಾಗಿರುವಾಗ 
ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು 

ಅನ್ನವ ತಿನ್ನದೆ ಚಿನ್ನ ತಿನುವೆಯೇನು, ಹೊನ್ನಿಗೆ ನಿನ್ನನೇ ಮಾರಿಕೊಳುವೆಯೇನು 
ಮೋಸದ ಹಾದಿಯು ಸುಖವ ತರುವುದೇನು, ಪ್ರೀತಿಯ ಮರೆತರೆ ಶಾಂತಿ ಇರುವುದೇನು 
ಧಾನವನಾಗದೆ  ಮಾನವನಾಗು, ನಗಿಸುತ ನಗುತಲಿ ಬಾಳಲಿ ಸಾಗು 
ಎಂದ ನಾನು ದ್ರೋಹಿಯೇನು, ಏಹ್! 

ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು 

ಸುಮ್ಮನೆ ಮಾತಲಿ ಕಾಲ ಕಳೆವೆ ಏಕೆ, ನಿನ್ನಯೀ ಬಾಳನು ವ್ಯರ್ಥಗೊಳಿಸಲೇಕೆ 
ತೀರದ ಆಸೆಯು ನಿನ್ನ ಮನಸಲೇಕೆ, ಜನಗಳ ತುಳಿಯುವ ನೀಚ ಬುದ್ದಿ ಏಕೆ 
ಎಲ್ಲರು ಕಲೆತು ದ್ವೇಷವ ಮರೆತು, ಸೋದರರಂತೆ ದುಡಿಯಿರಿ ಬಂದು 
ಎಂದ ನಾನು ವ್ಯರಿಯೇನು, ಏಹ್!

ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು 
ಸತ್ಯದ ಹಾದಿಯಲಿರುವಾಗ, ಧರ್ಮವೆ ರಕ್ಷಿಸುತ್ತಿರುವಾಗ 
ಈ ನಾಡಿಗೆ ನಾಡೆ ಹಿಂದಿರುವಾಗ, ಕನ್ನಡ ನನ್ನುಸಿರಾಗಿರುವಾಗ 
ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು 

Song: Yaaru Enu Maduvaru
Movie: Kranti Veera

No comments:

Post a Comment